ಸೋಲುವುದು ಖಚಿತವಾದರೆ ಸಿದ್ದರಾಮಯ್ಯ ಯಾರ ಕಾಲು ಬೇಕಾದ್ರೂ ಹಿಡಿಯುತ್ತಾರೆ-ಪ್ರತಾಪ್ ಸಿಂಹ ವ್ಯಂಗ್ಯ

ಸೋಮವಾರ, 22 ಏಪ್ರಿಲ್ 2019 (05:16 IST)
ಮೈಸೂರು : ಅಧಿಕಾರ ಪಡೆಯಲು ಸಿದ್ದರಾಮಯ್ಯ ಯಾರ ಕಾಲಿಗೆ ಬೇಕಾದ್ರು ಬೀಳುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.


ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ, ಸೋಲಿನ ಭಯದಿಂದ ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದು, ಅಧಿಕಾರ ಪಡೆಯಲು ಯಾರ ಕಾಲಿಗೆ ಬೇಕಾದರೂ ಬೀಳುತ್ತಾರೆ. ವಿಧಾನಸಭಾ ಚುನಾವಣೆಗೂ ಮುನ್ನ ಅಪ್ಪನ ಆಣೆಗೂ ಎಚ್‍ಡಿಕೆ ಸಿಎಂ ಆಗಲ್ಲ ಎನ್ನುತ್ತಿದ್ದ ಅವರೇ ಅಧಿಕಾರಕ್ಕಾಗಿ ಎಚ್‍.ಡಿ. ದೇವೇಗೌಡರ ಅವರ ಕಾಲಿಗೆ ಬಿದ್ದು ಸಿಎಂ ಮಾಡಿದ್ರು. ಈಗ ಆದೇ ಸೋಲಿನ ಭಯದಿಂದ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.


ಅಲ್ಲದೇ ಬಾರಿಯ ಚುನಾವಣೆಗೂ ಮುನ್ನ ವೀರಾವೇಶದಿಂದ ಚುನಾವಣೆ ಗೆಲ್ಲುತ್ತೇವೆ ಎಂದು ಬಂದರು. ಉಡಾಫೆಯಾಗಿ ಜಿಟಿಡಿ ಅವರ ಬಗ್ಗೆ ಮಾತನಾಡಿದ್ದರು. ಆದರೆ ಆದೇ ಸೋಲಿನ ಭಯ ಆರಂಭವಾದ ಕಾರಣ ಹಿಂದೆ ಸರಿದು ಜಿಟಿಡಿ ನಿನ್ನಿದ್ದರೆ ಗೆಲ್ಲಲು ಆಗುತ್ತದೆ ಎಂದು ಅವರ ಮನೆಗೆ ಹೋದರು. ಹೀಗಾಗಿ ಸೋಲುವುದು ಖಚಿತವಾದರೆ ಸಿದ್ದರಾಮಯ್ಯ ಅವರು ಯಾರ ಕಾಲು ಬೇಕಾದರೂ ಹಿಡಿಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ