`ಕಮಿಷನ್ ಹೊಡೆಯಲು ಮುಂದಾಗಿದ್ದಾರೆ- ಸಿದ್ದರಾಮಯ್ಯ

ಬುಧವಾರ, 15 ಫೆಬ್ರವರಿ 2023 (19:11 IST)
ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯದ ಬೊಕ್ಕಸವನ್ನು ಯದ್ವಾತದ್ವಾ ಲೂಟಿ ಮಾಡುತ್ತಿದೆ, ಚುನಾವಣೆಗೆ ಹಣ ಮಾಡಿಕೊಳ್ಳಲು ಪ್ರಾಜೆಕ್ಟ್​​​ಗಳನ್ನು ಅವರು ಮಾಡುತ್ತಿದ್ದಾರೆ. ಜೊತೆಗೆ ಕಮಿಷನ್ ಹೊಡೆಯಲು ಮುಂದಾಗುತ್ತಿದ್ದಾರೆ. ಅಂತಾ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ರು. ಈಗಾಗಲೇ ರಾಜ್ಯ ಸರ್ಕಾರದ ವಿರುದ್ದ 40 % ಕಮಿಷನ್ ಆರೋಪ ಕೇಳಿ ಬಂದಿದ್ದು, 40 % ಕಮಿಷನ್ ಮುಂದುವರೆದ ಭಾಗ ಇದು. ಜನರ ತೆರಿಗೆ ಹಣ ರಕ್ಷಣೆ ಮಾಡಬೇಕಿರೋದು ನಮ್ಮ ಜವಾಬ್ದಾರಿ. ಆದರೆ ಈ ಸರ್ಕಾರ ಯಾರು ಹೆಚ್ಚು ಕಮಿಷನ್ ಕೊಡುತ್ತಾರೆ ಅವ್ರಿಗೆ ಕಟ್ರಾಕ್ಟ್ ಕೊಡುತ್ತಾರೆ ಇಂತಹ ವರಸ್ಟ್ ಗೌರ್ನಮೆಂಟ್, ಕರಪ್ಟ್ ಗೌರ್ನಮೆಂಟ್ ಇನ್ನೊಂದಿಲ್ಲ ಎಂದು ಸಿದ್ದು ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ