ಯಡಿಯೂರಪ್ಪಗೆ ಡಿಸಿಎಂಗಳೇ ಗೊತ್ತಿಲ್ಲ ಎಂದ ಸಿದ್ದರಾಮಯ್ಯ

ಗುರುವಾರ, 10 ಅಕ್ಟೋಬರ್ 2019 (18:58 IST)
ವಿಧಾನಸಭೆ ಅಧಿವೇಶನದಲ್ಲಿ ಸಿಎಂಗೆ ಮಾಜಿ ಸಿಎಂ ಸಖತ್ ಟಾಂಗ್ ನೀಡಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪಗೆ ಉಪಮುಖ್ಯಮಂತ್ರಿಗಳು ಯಾರಿದ್ದಾರೆ ಅನ್ನೋದೇ ಗೊತ್ತಿಲ್ಲ ಅಂತ ಜರಿದಿದ್ದಾರೆ.

ಕಮಲ ಪಾಳೆಯದಲ್ಲಿ ಸ್ಪೋಟಗೊಂಡಿರೋ ಭಿನ್ನಮತವನ್ನ ಬಯಲಿಗೆ ಎಳೆದ ಸಿದ್ದರಾಮಯ್ಯ, ಸೋತವರು ಡಿಸಿಎಂ, ಮೊದಲ ಬಾರಿಗೆ ಸಚಿವರಾದವರೂ ಡಿಸಿಎಂ. ಆದರೆ ನಾನು ಸಹಮತ ವ್ಯಕ್ತಪಡಿಸೋದು ಮಾತ್ರ ಗೋವಿಂದ ಕಾರಜೋಳರಿಗೆ ಮಾತ್ರ ಅಂತ ಕುಟುಕಿದ್ದಾರೆ.

 ಬಿಜೆಪಿ ಹೈಕಮಾಂಡ್ ಗೆ ಯಡಿಯೂರಪ್ಪ ಈಗ ಬೇಡದ ಶಿಶುವನಂತೆ ಆಗಿದ್ದಾರೆ ಅಂತ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ