ಸಿದ್ದರಾಮಯ್ಯ ವಿರುದ್ಧ ಡಿಕೆ ಶಿವಕುಮಾರ್ ಬಣ ಗರಂ

ಸೋಮವಾರ, 28 ಅಕ್ಟೋಬರ್ 2019 (09:55 IST)
ಬೆಂಗಳೂರು : ಡಿಕೆಶಿ ಜೆಡಿಎಸ್ ಪಕ್ಷದ ಬಾವುಟ ಹಿಡಿದುಕೊಳ್ಳಬಾರದಿತ್ತು ಎಂದು ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಗರಂ ಆದ ವಿಚಾರಕ್ಕೆ ಸಿದ್ದರಾಮಯ್ಯ ವಿರುದ್ಧ ಡಿಕೆ ಶಿವಕುಮಾರ್ ಬಣ ಗರಂ ಆಗಿದ್ದಾರೆ.



ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದ ಡಿಕೆಶಿ ಅವರಿಗೆ ಎಲ್ಲರೂ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಈ ವೇಳೆ  ಡಿಕೆಶಿ ಜೆಡಿಎಸ್ ಪಕ್ಷದ ಬಾವುಟ ಹಿಡಿದುಕೊಂಡಿದ್ದರು. ಈ ಬಗ್ಗೆ ಗರಂ ಆದ ಸಿದ್ದರಾಮಯ್ಯ ದೋಸ್ತಿ ಮುಗಿದ ಮೇಲೆ ಡಿಕೆಶಿ ಜೆಡಿಎಸ್ ಪಕ್ಷದ ಬಾವುಟ ಹಿಡಿದುಕೊಳ್ಳಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಇದಕ್ಕೆ ಬೇಸರಗೊಂಡ ಡಿಕೆ ಶಿವಕುಮಾರ್ ಬಣದವರು, ಡಿಕೆಶಿ ಅವರ ಜೊತೆ ಕೈ ಹೈಕಮಾಂಡ್ ಸಂಬಂಧ ಕಂಡು, ಹಾಗೂ ಡಿಕೆಶಿಗೆ ಮಾಡಿದ ಅದ್ಧೂರಿ ಸ್ವಾಗತ ಕಂಡು ಹೀಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಉದ್ದೇಶ ಪೂರ್ವಕವಾಗಿ ಹೀಗೆ ಮಾತನಾಡಿದ್ದಾರೆ ಎಂದು ಡಿಕೆಶಿ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ