ಸಿದ್ದು ಸಿಎಂ ಇಬ್ರಾಹಿಂಗೆ ಕರೆ

ಸೋಮವಾರ, 7 ಫೆಬ್ರವರಿ 2022 (15:40 IST)
ಪಕ್ಷ ಬಿಡುವ ಹೇಳಿಕೆ ನೀಡಿರುವ ಸಿಎಂ ಇಬ್ರಾಹಿಂಗೆ ವಿಪಕ್ಷನಾಯಕ ಸಿದ್ದರಾಮಯ್ಯ ಕರೆ ಮಾಡಿ ಪಕ್ಷ ಬಿಡದಂತೆ ತಿಳಿಸಿ ದ್ದಾರೆ. ಬೆಂಗಳೂರಿನಲ್ಲಿ ದೂರವಾಣಿ ಕರೆ ಮಾಡಿರುವ ಸಿದ್ದರಾಮಯ್ಯ, ಪಕ್ಷ ಬಿಡಬೇಡ, ಮುಂದೆ ಸ್ಥಾನಮಾನ‌ ಕೊಡೋಣ ಎಂದು ಹೇಳಿ ದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಆಯ್ತು ನೋಡೋಣ ಎಂದು ಕರೆ ಕಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಸಿದ್ಧು, ಸಿಎಂ ಇಬ್ರಾಹಿಂ ಜೊತೆ ಮಾತನಾಡಿದ್ದು, ಪಕ್ಷ ಬಿಡದಂತೆ ಮನವಿ ಮಾಡಲಾಗಿದೆ. ಅಲ್ಲದೇ ಮಹದೇ ವಪ್ಪ ಅವರು ಕೂಡ ಇಬ್ರಾಹಿಂ ಭೇಟಿ ಮಾಡಿ ಪಕ್ಷ ಬಿಡದಂತೆ ಒತ್ತಾಯ ಮಾಡಿದ್ದಾರೆ. ಮುಂದಿನ ಬೆಳವಣಿಗೆ ನೋಡೋಣ ಇನ್ನೂ ಚರ್ಚೆ ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ