ಸ್ವಕ್ಷೇತ್ರದ ನೆರೆ ಸಂತ್ರಸ್ತರ ಭೇಟಿ ವೇಳೆ ಅಧಿಕಾರಿ ಮೇಲೆ ಫುಲ್ ಗರಂ ಆದ ಸಿದ್ದರಾಮಯ್ಯ

ಬುಧವಾರ, 23 ಅಕ್ಟೋಬರ್ 2019 (11:24 IST)
ಬಾದಾಮಿ : ತಮ್ಮ ಸ್ವಕ್ಷೇತ್ರದ ನೆರೆ ಸಂತ್ರಸ್ತರ ಭೇಟಿಗೆ ತೆರಳಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಲ್ಲಿನ ಅಧಿಕಾರಿ ಮೇಲೆ ಪುಲ್ ಗರಂ ಆಗಿದ್ದಾರೆ.




ಇಂದು ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ಬಾದಾಮಿ ತಾಲೂಕಿನ ಗೋವಿನಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ವೇಳೆ  ಸ್ಥಳಕ್ಕೆ ಅಧಿಕಾರಿಗಳು ಗೈರು ಹಾಜರಾದ ಹಿನ್ನಲೆಯಲ್ಲಿ ಪುಲ್ ಗರಂ ಆದ ಸಿದ್ದರಾಮಯ್ಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಅಧಿಕಾರಿಗಳು ಕತ್ತೆ ಕಾಯ್ತಿದ್ದಾರಾ? ನನಗಿಂತ ಮುಂಚೆ ಬರೋಕೆ ಆಗಲ್ವಾ? ಏಯ್ ಎಲ್ಲಿದ್ದಾರಯ್ಯ ಅಧಿಕಾರಿಗಳು  ಎಂದು ಪುಲ್ ಗರಂ ಆಗಿ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ