‘ಟಿಪ್ಪು ಸುಲ್ತಾನ್ ಹೆಸರೂ ಭಾರತ ರತ್ನಕ್ಕೆ ಶಿಫಾರಸ್ಸು’

ಸೋಮವಾರ, 21 ಅಕ್ಟೋಬರ್ 2019 (17:53 IST)
ಕೈ ಪಾಳೆಯದ ಮುಖಂಡರು ವೀರ್ ಸಾವರ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡೋದನ್ನು ಮೊದಲು ಬಿಡಬೇಕು. ಹೀಗಂತ ಸಚಿವರೊಬ್ಬರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಟು ಪದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಟಿಪ್ಪು ಸುಲ್ತಾನ್ ಗೂ ಮುಂದಿನ ದಿನಗಳಲ್ಲಿ ಭಾರತ ರತ್ನ ಕೊಡಿ ಅಂತ ಸಿದ್ದರಾಮಯ್ಯ ಶಿಫಾರಸ್ಸು ಮಾಡುವಂಥವರು ಅಂತ ಕುಟುಕಿದ್ರು.

ಯಾರಿಗೂ ಇಷ್ಟವಿರಲಿಲ್ಲ. ಆದರೂ ಕಾಂಗ್ರೆಸ್ ನವರು ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿದ್ರು ಅಂತ ದೂರಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ