ಸಿದ್ದು ಸಿಎಂ ಆಗಲೆಂದು ಅಭಿಮಾನಿಗಳ ಹರಕೆ‘

ಬುಧವಾರ, 17 ಮೇ 2023 (19:22 IST)
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಬೇಕೆಂದು ಸಿದ್ದು ಅಭಿಮಾನಿಗಳು ಹರಕೆ ಹೊತ್ತು ಈಡುಗಾಯಿ ಒಡೆದಿದ್ದಾರೆ. ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್​ನ ಗಣಪತಿ ದೇವಾಲಯದ ಮುಂಭಾಗ ತೆಂಗಿನ ಕಾಯಿ ಒಡೆದು ಆಗ್ರಹಿಸಿದ್ದಾರೆ. ಈಡುಗಾಯಿ ಒಡೆದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೆಂದು ಹರಕೆ ಸಲ್ಲಿಸಿದ್ದಾರೆ. ಸಿದ್ದು ಅಭಿಮಾನಿಗಳು ಹೈಕಮಾಂಡ್​ಗೆ ಒತ್ತಡ ತಂದಿದ್ದಾರೆ. ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಕಾರ್ಯಕರ್ತರು, ಸಿದ್ದು ಸಿಎಂ ಆಗಲೇಬೇಕೆಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ