ಎಸ್‌.ಎಂ.ಕೃಷ್ಣ, ರಮ್ಯಾ ಯಾರೇ ಬಂದರೂ ನನ್ನ ಸ್ಪರ್ಧೆ ಖಚಿತ– ಅಂಬರೀಶ

ಶುಕ್ರವಾರ, 2 ಫೆಬ್ರವರಿ 2018 (19:13 IST)
ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಯಾರೇ ಸ್ಪರ್ಧಿಸಿದರೂ ಮುಂಬರುವ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಎಂದು ಮಂಡ್ಯ ಶಾಸಕ ಅಂಬರೀಶ ಹೇಳಿದ್ದಾರೆ.

ಮದ್ದೂರಿನಲ್ಲಿ ಮಾತನಾಡಿದ ಅವರು, ನಾನು ಬೇರೆ ಪಕ್ಷಕ್ಕೆ ಹೋಗಲ್ಲ. ನಾನು ಆಕಾಂಕ್ಷಿಯಲ್ಲ, ನಾನೇ ಅಭ್ಯರ್ಥಿ. ಟಿಕೆಟ್ ಯಾರಿಗಾದರೂ ನೀಡಲಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
 
ಯಾರೇ ಅಭ್ಯರ್ಥಿಯಾದರೂ ಕೂಡ ನನ್ನ ಸ್ಪರ್ಧೆ ಖಚಿತ. ರಮ್ಯಾ, ಎಸ್.ಎಂ.ಕೃಷ್ಣ ಹಾಗೂ ಮಹೇಶ್ಚಂದ್ರ ಯಾರಿಗಾದರೂ ಟಿಕೆಟ್ ನೀಡಲು ನಾನು ಸ್ಪರ್ಧಿಸುವುದು ಶೇ 100 ರಷ್ಟು ಖಚಿತ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ