ಬಿಜೆಪಿಗಾಗಿ ರೈಲು ಏರಿದ ಎಸ್ ಎಂ ಕೃಷ್ಣ

ಸೋಮವಾರ, 3 ಏಪ್ರಿಲ್ 2017 (10:16 IST)
ಬೆಂಗಳೂರು: ಉಪಚುನಾವಣೆ ಪ್ರಚಾರ ಕಾವೇರುತ್ತಿದೆ. ಬಿಜೆಪಿಗೆ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಪಕ್ಷದ ಪರ ಪ್ರಚಾರ ಮಾಡಲು ಆರ್. ಅಶೋಕ್ ಜತೆ ಮೆಜೆಸ್ಟಿಕ್ ನಿಂದ ರೈಲು ಏರಿದ್ದಾರೆ!

 

ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಇಂದು ಬಿಜೆಪಿಯ ಪ್ರಮುಖ ನಾಯಕರ ಜತೆಗೆ ಪ್ರಚಾರ ನಡೆಸಲಿರುವ ಎಸ್ಎಂ ಕೃಷ್ಣ ಮೆಜೆಸ್ಟಿಕ್ ನಿಂದ ರೈಲು ಮಾರ್ಗವಾಗಿ ಅಖಾಡಕ್ಕಿಳಿದಿದ್ದಾರೆ. ಇದು ಮುಂದಿನ ಚುನಾವಣೆಗಳಿಗೆ ತಾವು ಬಿಜೆಪಿ ಪರ ಪ್ರಚಾರ ಮಾಡಲಿರುವ ಕಾರ್ಯಕ್ರಮಗಳಿಗೆ ಆರಂಭ ಎಂದು ಎಸ್ಎಂಕೆ ಹೇಳಿಕೊಂಡಿದ್ದಾರೆ.

 
ಇದೇ ವೇಳೆ ಮಾತನಾಡಿದ ಬಿಜೆಪಿ ನಾಯಕ ಆರ್. ಅಶೋಕ್ ಇಂದು ಬಿಜೆಪಿಯ ಎಲ್ಲಾ ರಾಜ್ಯ ನಾಯಕರು ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದಿದ್ದಾರೆ. ಎಸ್ಎಂಕೆಯಂತೆ ಸದ್ಯದಲ್ಲೇ ಕಾಂಗ್ರೆಸ್ ಕಟ್ಟಿದ ನಾಯಕರೆಲ್ಲಾ ಬಿಜೆಪಿಗೆ ವಲಸೆ ಬರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ