ಯೋಧನ ಮೇಲೆ ಗುಂಡು ಹಾರಿಸಿದ ಪಾಪಿ ತಂದೆ!

ಮಂಗಳವಾರ, 13 ಡಿಸೆಂಬರ್ 2016 (12:04 IST)
ತಂದೆಯೇ ಯೋಧ ಪುತ್ರನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ವರದಿಯಾಗಿದೆ. ಈ ಭೀಕರ ಘಟನೆಯಲ್ಲಿ ಇನ್ನಿಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.
 
ಈರಣ್ಣ ವಿಠ್ಠಲ ಇಂಡಿ ಹತ್ಯೆಯಾದ ಯೋಧ. ಇವರ ತಂದೆ ವಿಠ್ಠಲ ಇಂಡಿ ಹತ್ಯೆಯ ಆರೋಪಿಯಾಗಿದ್ದಾನೆ. 
 
ಈರಣ್ಣ ವಿಠ್ಠಲ ಇಂಡಿ ರಾಜಧಾನಿ ಬೆಂಗಳೂರಿನ ಎಂಇಸಿ ಸೆಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ಕರ್ತವ್ಯ ಮುಗಿಸಿ ಸ್ವಗ್ರಾಮಕ್ಕೆ ಆಗಮಿಸಿದ್ದರು. ರಾತ್ರಿ ಮನೆಗೆ ಆಗಮಿಸಿದ ಆರೋಪಿ ವಿಠ್ಠಲ ವಾಹನ ಖರೀದಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಈ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.
 
ಈ ವೇಳೆ ಆರೋಪಿ ವಿಠ್ಠಲ ಇಂಡಿಯ ಪತ್ನಿ ಅನುಸೂಯಾ ಹಾಗೂ ಪುತ್ರಿ ಪ್ರೀತಿ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ