ವಿಧಾನಸೌಧದ ಭದ್ರತೆ ಪರಿಶೀಲನೆ ‌ನಡೆಸಿದ ಸ್ಪೀಕರ್ ಯು ಟಿ ಖಾದರ್

ಸೋಮವಾರ, 10 ಜುಲೈ 2023 (15:04 IST)
ವಿಧಾನಸೌಧದ ಭದ್ರತೆಯನ್ನ ಸ್ಪೀಕರ್ ಯುಟಿ ಖಾದರ್ ಪರಿಶೀಲಿಸಿದ್ರು.ಸ್ಪೀಕರ್ ಗೆ ಬೆಂಗಳೂರು ಪೊಲೀಸ್ ‌ಆಯುಕ್ತ ದಯಾನಂದ್ ,ಸಿಸಿಬಿ ಜಂಟಿ ಆಯುಕ್ತ ಶರಣಪ್ಪ‌ ಸಾಥ್‌ನೀಡಿದ್ರು.ಕೆಂಗಲ್ ಗೇಟ್ ಭದ್ರತೆಯ ಪರೀಶೀಲನೆ ನಡೆಸಿದ್ದು,ಪ್ರತಿಯೊಬ್ಬರ ಐಡಿ ಕಾರ್ಡ್ ಪರಿಶೀಲಿಸಿ‌ ಬಿಡುವಂತೆ ಸೂಚನೆ ನೀಡಿದ್ದಾರೆ.ವಿಧಾನಸೌಧದ ಸ್ಪೀಕರ್‌ ಕೊಠಡಿ ಸಂಖ್ಯೆ  125 ರಲ್ಲಿ ಭದ್ರತಾ‌ ಲೋಪದ ಬಗ್ಗೆ  ಯು ಟಿ ಖಾದರ್ ಸಭೆ ನಡೆಸಿದ್ದಾರೆ.ಸಭೆಯಲ್ಲಿ ಬೆಂಗಳೂರು ‌ಪೊಲೀಸ್ ಆಯುಕ್ತ ದಯಾನಂದ, ಸಿಸಿಬಿ ಜಂಟಿ ಆಯುಕ್ತ ಶರಣಪ್ಪ, ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಭಾಗಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ