ಶೋಭಾ ಕರಂದ್ಲಾಜೆಗೆ ಶ್ರೀರಾಮುಲು ತಿರುಗೇಟು

ಬುಧವಾರ, 25 ಡಿಸೆಂಬರ್ 2019 (19:03 IST)
ಮಂಗಳೂರು ಗಲಭೆ ಪ್ರಕರಣ ಬಿಜೆಪಿ ಮುಖಂಡರ ನಿದ್ದೆ ಕೆಡಿಸಿದಂತಿದೆ. ಹೀಗಾಗಿ ಎಲ್ಲಾ ನಾಯಕರು ಹೋದಲ್ಲಿ ಬಂದಲ್ಲಿ ಹೇಳಿಕೆ ನೀಡೋಕೆ ಶುರುಮಾಡಿದ್ದಾರೆ.

ಮಂಗಳೂರು ಗಲಭೆ ಪ್ರಕರಣಕ್ಕೆ ಯಾದಗಿರಿಯಲ್ಲಿ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಪರಿಹಾರ ವಾಪಸ್ ಪಡೆದುಕೊಳ್ಳುತ್ತೇವೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಸಿಸಿಟಿವಿ ದೃಶ್ಯಗಳು ನೋಡಿದಾಗ ಎಲ್ಲ ದೃಶ್ಯಾವಳಿಗಳು ಸ್ಪಷ್ಟವಾಗಿ ಕಾಣುತ್ತೇವೆ. ಕೆಲವೊಂದು ಕಿಡಿಗೇಡಿಗಳು ಈ ರೀತಿ ಮಾಡಿರುವಾಗ ಕಾರಣ ಇದರ ಬಗ್ಗೆ ತನಿಖೆಯಾಗಬೇಕಿದೆ.

ಕಿಡಿಗೇಡಿಗಳು ಮಾಡಿರುವುದರಿಂದ ಶೋಭಾ ಕರಂದ್ಲಾಜೆ ಈ‌ ರೀತಿ ಹೇಳಿಕೆ ನೀಡಿರಬಹುದು ಎಂದಿದ್ದಾರೆ.

ತನಿಖೆ ಪೂರ್ಣಗೊಂಡು ವರದಿ ಬಂದ ನಂತರ ಸರ್ಕಾರ ಪರಿಹಾರ ನೀಡುತ್ತದೆ. ತಪ್ಪಿತಸ್ಥರಾದರೆ ಪರಿಹಾರ ವಾಪಸ್ ತೆಗೆದುಕೊಳ್ಳುತ್ತೆ  ಅಂತ ಶ್ರೀರಾಮುಲು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ