ರಾಜ್ಯ ಸರ್ಕಾರದ ಖಜಾನೆ ಖಾಲಿ - ಆರ್​​​.ಅಶೋಕ್

ಶುಕ್ರವಾರ, 22 ಸೆಪ್ಟಂಬರ್ 2023 (17:03 IST)
ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆ ಎಂದು ಮಾಜಿ ಸಚಿವ R​.ಅಶೋಕ್​ ಲೇವಡಿ ಮಾಡಿದ್ರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಫ್ರೀ ಫ್ರೀ ಫ್ರೀ ಎಂದು ಹೇಳಿ ಖಜಾನೆ ಖಾಲಿ ಮಾಡಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯಗೆ ನಾನು ಐದು ವರ್ಷ ಇರ್ತೀನಿ ಎನ್ನುವ ವಿಶ್ವಾಸ ಇಲ್ಲ. ಡಿ.ಕೆ.ಶಿವಕುಮಾರ್​​ಗೆ ತಾನು ಸಿಎಂ ಆಗ್ತೀನಿ ಎನ್ನುವ ವಿಶ್ವಾಸವೂ ಇಲ್ಲ. ಈ ಮಧ್ಯೆ ಡಿಸಿಎಂ ಹುದ್ದೆ ಬೇಕೆಂಬ ಕೂಗು ಶುರುವಾಗಿದೆ. ಇವರು ಹೀಗೇ ಕಿತ್ತಾಡುತ್ತಿದ್ರೆ ನಾವು ಕಾವೇರಿ ಹೇಗೆ ಗೆಲ್ಲೋದು. ರಾಜ್ಯದ ಜನರಿಗೆ ಈ ಸರ್ಕಾರ ಒಂದು ರೀತಿ ಶಾಪವಾಗಿದೆ ಎಂದು ಆರ್​​.ಅಶೋಕ್ ವಾಗ್ದಾಳಿ ನಡೆಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ