ಉಮಾಪತಿ ವಿರುದ್ದ ದರ್ಶನ್‌ ಅಭಿಮಾನಿಗಳ ಬೈಕ್‌ ಜಾಥಾಗೆ ತಡೆ

geetha

ಸೋಮವಾರ, 26 ಫೆಬ್ರವರಿ 2024 (18:00 IST)
ಬೆಂಗಳೂರು : ಈ ಹಿಂದೆ ಬೊಮ್ಮನಹಳ್ಳಿಯಲ್ಲಿ ಉಮಾಪತಿ ಶ್ರೀನಿವಾಸ್ ಚುನಾವಣೆಗೆ ಸ್ಪರ್ಧಿಸಿದ್ದರು. ಅವರ ಎದುರಾಳಿ ಸತೀಶ್‌ ರೆಡ್ಡಿ ಪರವಾಗಿ ನಟ ದರ್ಶನ್‌ ಪ್ರಚಾರ ನಡೆಸಿದ್ದರು. ಬಳಿಕ ಕಾಟೇರ ಫಿಲಂ ಟೈಟಲ್‌ ಗೆ ಸಂಬಂಧಿಸಿದಂತೆ ದರ್ಶನ್‌ ಮತ್ತು ಉಮಾಪತಿ ನಡುವೆ ಮಾತಿನ ಚಕಮಕಿ ನಡೆದಿತ್ತು. 
 
ಈ ವೇಳೇ ನಟ ದರ್ಶನ್‌ ಉಮಾಪತಿಯವರನ್ನು ತಗಡು ಎಂದು ಸಂಬೋಧಿಸಿದ ಕಾರಣ ಹಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. ನಟ ದರ್ಶನ್‌ವಿರುದ್ದ ದೂರೂ ಸಹ ದಾಖಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಉಮಾಪತಿ , ದೇಹದಲ್ಲಿ ತೂಕವಿದ್ದರೆ ಸಾಲದು ಮಾತಿನಲ್ಲೂ ತೂಕವಿರಬೇಕು ಎಂದು ನಟ ದರ್ಶನ್‌ ವಿರುದ್ದ ಟಾಂಗ್‌ ನೀಡಿದ್ದರು. ಇದಕ್ಕೆ ದರ್ಶನ್‌ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. 

ಚಿತ್ರನಟ ದರ್ಶನ್‌ ಅಭಿಮಾನಿಗಳು ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ವಿರುದ್ದ ನಡೆಸಲು ಯೋಜಿಸಲಾಗಿದ್ದ ಬೈಕ್‌ ಜಾಥಾಗೆ ಪೊಲೀಸರು ತಡೆ ನೀಡಿದ್ದಾರೆ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಹಿತಾಸಕ್ತಿಯಿಂದ ಬೈಕ್‌ ಜಾಥಾಗೆ ಅವಕಾಶ ನಿರಾಕರಿಸಿರುವ ಪೊಲೀಸರು ಫ್ರೀಡಂ ಪಾರ್ಕ್‌ ನಲ್ಲಿ ಪ್ರತಿಭಟನೆ ನಡೆಸಲು ಬೇಕಿದ್ದರೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ