ಕಾಂಗ್ರೆಸ್‌ನ ಅನ್ನಭಾಗ್ಯಕ್ಕೆ ಸುಧಾಕರ್‌ ಕೌಂಟರ್‌

ಗುರುವಾರ, 4 ಮೇ 2023 (14:30 IST)
ಚಿಕ್ಕಬಳ್ಳಾಪುರ : ಹೆಚ್ಚು ಅನ್ನ ತಿಂದರೆ ಸಕ್ಕರೆ ಕಾಯಿಲೆ ಹೆಚ್ಚಾಗುತ್ತದೆ. ಇದರಿಂದಾಗಿ ಆರೋಗ್ಯಯುಕ್ತ ಆಹಾರ ನೀಡುವುದೇ ಬಿಜೆಪಿ ಗುರಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
 
ತಾಲೂಕಿನ ಪೋಶೆಟ್ಟಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಅವರು, ಪ್ರತಿ ಮನೆಗೆ ಪ್ರತಿದಿನ ಅರ್ಧ ಲೀಟರ್ ಹಾಲು ನೀಡಲಾಗುತ್ತದೆ. ಹೆಚ್ಚು ಅನ್ನ ತಿಂದರೆ ಸಕ್ಕರೆ ಕಾಯಿಲೆ ಹೆಚ್ಚಾಗಲಿದೆ. ಆರೋಗ್ಯಯುಕ್ತ ಆಹಾರ ನೀಡುವುದು ಬಿಜೆಪಿ ಗುರಿಯಾಗಿದೆ.

ಕಾಂಗ್ರೆಸ್ ನೀಡುವ 100 ರೂ. ಅಕ್ಕಿಗೆ ಬದಲಾಗಿ ಬಿಜೆಪಿ ತಿಂಗಳಿಗೆ 600 ರೂ. ಮೌಲ್ಯದ ಹಾಲು ನೀಡುತ್ತಿದೆ. ಇದೇ ರೀತಿ 60 ವರ್ಷದಿಂದ ಕಾಂಗ್ರೆಸ್ ಜನರನ್ನು ಯಾಮಾರಿಸಿದೆ ಎಂದು ಆರೋಪಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ