ಲಾಕ್ ಡೌನ್ ಉಲ್ಲಂಘಿಸಿದಂತೆ ಮಂಡ್ಯ ಜನತೆಗೆ ಸುಮಲತಾ ಅಂಬರೀಶ್ ಖಡಕ್ ಸಂದೇಶ

ಬುಧವಾರ, 8 ಏಪ್ರಿಲ್ 2020 (09:44 IST)
ಮಂಡ್ಯ: ಕೊರೋನಾ ತಡೆಗೆ ಲಾಕ್ ಡೌನ್ ಆದೇಶ ಮಾಡಿದ್ದರೂ ಡೋಂಟ್ ಕೇರ್ ಎಂದು ಬೀದಿಯಲ್ಲಿ ಎಂದಿನಂತೆ ಸುತ್ತಾಡುತ್ತಿರುವ ಜನತೆಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಖಡಕ್ ಸಂದೇಶ ಕೊಟ್ಟಿದ್ದಾರೆ.


ಮಂಡ್ಯದಲ್ಲೂ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷ ಮನವಿ ಮಾಡಿರುವ ಸುಮಲತಾ ಅಂಬರೀಶ್ ಮನೆಯಲ್ಲೇ ಇರಿ ಸುರಕ್ಷಿತವಾಗಿರಿ ಎಂದಿದ್ದಾರೆ.

ಮಂಡ್ಯದ ಮಳವಳ್ಳಿಯಲ್ಲಿ 3 ಕೊರೋನಾ ಪ್ರಕರಣಗಳು ದೃಢಪಟ್ಟಿದೆ. ಇದರ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ. ಲಾಕ್ ಡೌನ್ ನಿಯಮವನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಾಗಿ ಪಾಲಿಸಿ. ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಡಿ. ಮನೆಯಲ್ಲೇ ಇದ್ದು ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ