ಶಾಸಕ ಗಣೇಶ್ ನನ್ನು ಬಂಧಿಸಿ ಎಂದ ಸುರೇಶ್ ಬಾಬು

ಶನಿವಾರ, 26 ಜನವರಿ 2019 (17:48 IST)
ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್ ಹಲ್ಲೆ ನಡೆಸಿರುವುದನ್ನು ನಾನು ಖಂಡಿಸುತ್ತೇನೆ. ಕೂಡಲೇ ಪೊಲೀಸರು ಶಾಸಕ ಗಣೇಶ್ ನನ್ನು ಪೊಲೀಸರು ಬಂಧಿಸಬೇಕೆಂದು ಕಂಪ್ಲಿ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಆಗ್ರಹಿಸಿದ್ದಾರೆ.

ತಮ್ಮ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರ ನಡುವೆ ವೈಮನಸ್ಸು ಏನೇ ಇರಲಿ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕು, ಅದು ಬಿಟ್ಟು ರೀತಿ ರಾಜ್ಯ ತಲೆ ತಗ್ಗಿಸುವಂತೆ ಬಹಿರಂಗವಾಗಿ ಹೊಡೆದಾಡಿಕೊಳ್ಳುವುದು ಸರಿಯಲ್ಲ ಗಣೇಶ್ ನಿಂದ ಆನಂದ್ ಸಿಂಗ್ ಮೇಲೆ ಹಲ್ಲೆ ಆಗುತ್ತೆ ಅಂತ ನಾನು ಊಹಿಸಿಯೂ ಇರಲಿಲ್ಲ.

ಒಬ್ಬ ಜನಪ್ರತಿನಿಧಿ ಇನ್ನೊಬ್ಬ ಜನಪ್ರತಿನಿಧಿ ಮೇಲೆ ಹಲ್ಲೆ ಮಾಡುವುದು ಸಮಾಜದ ಜನತೆಯ ದೃಷ್ಠಿಯಲ್ಲಿ ಕೀಳಾದುದು, ಪ್ರಕರಣದಲ್ಲಿ ಗಣೇಶ್ ಅವರು ತಲೆಮಾರಿಸಿಕೊಂಡು ಓಡಾಡುವುದಲ್ಲದೇ ಕಾನೂನಿಗೆ ತಲೆಬಾಗಬೇಕೆಂದು ಆಗ್ರಹಿಸಿದ್ದಾರೆ.
  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ