ಸುರ್ಜೇವಾಲ ರಾಜ್ಯದ ಜನತೆಯ ಮುಂದೆ ಕ್ಷಮೆ ಕೇಳಬೇಕು- ಸಿಸಿ ಪಾಟೀಲ್

ಸೋಮವಾರ, 27 ಮಾರ್ಚ್ 2023 (13:23 IST)
ಸಿಎಂ ವಿರುದ್ಧ ಸುರ್ಜೇವಾಲ ಕೆಟ್ಟ ಪದಗಳಲ್ಲಿ ನಿಂದಿಸಿದ್ದಾರೆ ಎಂದು ಸಿಸಿ ಪಾಟೀಲ್ ಹೇಳಿದ್ದಾರೆ.ಅಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಮಾನ ಮಾರ್ಯಾದಿ ಇದ್ರೆ ಅವರನ್ನ ನಾವು ದುರ್ಯೋಧನ ಅಂತ ಹೇಳಬಹುದಾ..ಸುರ್ಜೇವಾಲ ರಾಜ್ಯದ ಜನತೆಯ ಮುಂದೆ ಕ್ಷಮೆ ಕೇಳಬೇಕು.ಒಂದು ವೇಳೆ ಸುರ್ಜೇವಾಲ ಕ್ಷಮೆ ಕೇಳಿಲ್ಲ ಅಂದ್ರೆ ಸುರ್ಜೇವಾಲ ಹೋಗುವ ಕಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸ್ತಾರೆ ಎಂಬ ಎಚ್ಚರಿಕೆಯನ್ನ ಸಿಸಿ ಪಾಟೀಲ್ ನೀಡಿದ್ದಾರೆ.
 
ಸುರ್ಜೇವಾಲಗೆ ಕೇಳಿ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಅಂತ..ಇದುವರೆಗೂ ಅವರಿಗೆ ಮೀಸಲಾತಿ ಕೊಡೋಕೆ ಆಗಿರಲಿಲ್ಲ.ಕೇವಲ ಮುಸ್ಲಿಂರ ಒಲೈಕೆ ಮಾಡ್ತಾ ಬಂದಿದ್ದಾರೆ.ಡಿಕೆಶಿಯವರು ಮೀಸಲಾತಿ ವಾಪಸ್ ತಗೋತಿವಿ ಅಂತಾರೆ .ಅಷ್ಟು ಪರಿಜ್ಞಾನ ಇಲ್ವಾ ಅವರಿಗೆ ಅವರಿಗೆ ಸಮುದಾಯದ ಜನತೆಯೇ ಚುನಾವಣೆಯಲ್ಲಿ ಬುದ್ಧಿ ಕಲಿಸಲಿದ್ದಾರೆ ಎಂದು ಸಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ