ಮೂವರು ಚುನಾವಣಾಧಿಕಾರಿಗಳ ಅಮಾನತು

ಮಂಗಳವಾರ, 22 ನವೆಂಬರ್ 2022 (19:00 IST)
ಚಿಲುಮೆಯಿಂದ ಅಕ್ರಮ ಡೇಟಾ ಸಂಗ್ರಹ ಆರೋಪ ಸಂಬಂಧ ಮೂವರು ಚುನಾವಣಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮಹದೇವಪುರ ಕ್ಷೇತ್ರದ ಚಂದ್ರಶೇಖರ್, ಚಿಕ್ಕಪೇಟೆ ಕ್ಷೇತ್ರದ ಭೀಮಾಶಂಕರ್​, ಶಿವಾಜಿನಗರ ಕ್ಷೇತ್ರದ ಸುಹೇಲ್ ಅಹಮದ್​​​ರನ್ನು ಸಸ್ಪೆಂಡ್​​ ಮಾಡಲಾಗಿದೆ. ಕರ್ತವ್ಯ ಲೋಪದ ಮೇಲೆ ಮೂವರನ್ನು ಅಮಾನತು ಮಾಡಲಾಗಿದೆ. BBMP ಮುಖ್ಯ ಆಯುಕ್ತ ತುಷಾರ್​​​ ಗಿರಿನಾಥ್​​​ ಈ ಆದೇಶ ಮಾಡಿದ್ದಾರೆ. ಚಿಲುಮೆ ಸಂಸ್ಥೆ ಪ್ರತಿನಿಧಿಗಳಿಗೆ BOL ಕಾರ್ಡ್ ನೀಡಿ, ಅಕ್ರಮ ಡೇಟಾ ಸಂಗ್ರಹಕ್ಕೆ ಅನುವು ಮಾಡಿಕೊಟ್ಟ ಆರೋಪ ಹಿನ್ನೆಲೆಯಲ್ಲಿ ಈ ಆದೇಶ ಮಾಡಲಾಗಿದೆ. ಮೂರು ಕ್ಷೇತ್ರಗಳಿಗೆ ಬೇರೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಕ್ರಮವೇ ನಡೆದಿಲ್ಲವೆಂದು ಸರ್ಕಾರ ವಾದಿಸುತ್ತಿದ್ದು, ಇದೀಗ ಮೂವರು ಅಧಿಕಾರಿಗಳನ್ನು ಯಾಕೆ ಸಸ್ಪೆಂಡ್ ಮಾಡಿದ್ರು ಎಂಬ ಪ್ರಶ್ನೆ ಎದ್ದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ