ರಾಜೀನಾಮೆ ನೀಡಿ ಸಿಬಿಐ ತನಿಖೆ ಎದುರಿಸಿ: ಸಚಿವ ಕುಲ್ಕರ್ಣಿಗೆ ಸ್ವಾಮಿಜಿ ಸಲಹೆ

ಭಾನುವಾರ, 3 ಡಿಸೆಂಬರ್ 2017 (13:17 IST)
ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ ಎದುರಿಸುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲ್ಕರ್ಣಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಬಿಐ ತನಿಖೆ ಎದುರಿಸಲಿ ಎಂದು ಸ್ವಾಮಿಜಿ ಆಗ್ರಹಿಸಿದ್ದಾರೆ.  
ಧಾರವಾಡ ತಾಲೂಕಿನ ಮನಗುಂಡಿಯ ಶ್ರೀ ಗುರು ಬಸವ ಮಹಾಮನೆ ಸ್ವಾಮೀಜಿ ಮಾತನಾಡಿ, ಸಚಿವ ಕುಲ್ಕರ್ಣಿಯವರಿಗೆ ಆತ್ಮಸಾಕ್ಷಿಯಿದ್ದರೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ತಿಳಿಸಿದ್ದಾರೆ.
 
ಸಚಿವರು ನಿಜವಾಗಿಯೂ ಬಸವಣ್ಣರ ಅನುಯಾಯಿಯಾಗಿದ್ದಲ್ಲಿ ಸತ್ಯಕ್ಕೆ ತಕ್ಕಂತೆ ನಡೆಯಲಿ. ಇಲ್ಲವಾದಲ್ಲಿ ಅವರನ್ನು ಬಸವಣ್ಣನವರ ಅನುಯಾಯಿ ಎಂದು ಒಪ್ಪಿಕೊಳ್ಳಲಾಗದು ಎಂದು ಗುಡುಗಿದ್ದಾರೆ.  
 
ಸಚಿವ ವಿನಯ್ ಕುಲ್ಕರ್ಣಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಶ್ರೀಗಳು ರಾಜೀನಾಮೆಗೆ ಒತ್ತಾಯಿಸಿರುವುದು ಬಿಜೆಪಿ ಪ್ರತಿಭಟನೆಗೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ