ಬಿಜೆಪಿಗೆ ಮಕ್ಕಳನ್ನು ಹಡೆಯುವ ಶಕ್ತಿಯಿಲ್ಲ, ದತ್ತು ತೊಗೊಳ್ತಾರೆ: ಸಚಿವ ವಿನಯ್ ಕುಲ್ಕರ್ಣಿ

ಶನಿವಾರ, 18 ನವೆಂಬರ್ 2017 (15:04 IST)
ಬಿಜೆಪಿಗೆ ಮಕ್ಕಳನ್ನು ಹಡೆಯುವ ಶಕ್ತಿಯಿಲ್ಲ, ದತ್ತು ತೊಗೊಳ್ತಾರೆ ಎಂದು ಸಚಿವ ವಿನಯ್ ಕುಲಕರ್ಣಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಖಾತೆ ಸಚಿವ ಡಿಂ.ಕೆ.ಶಿವಕುಮಾರ್ ಮತ್ತು ಪ್ರಮೋದ್ ಮದ್ವರಾಜ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಮಕ್ಕಳನ್ನು ಹಡೆಯುವ ಶಕ್ತಿಯಿಲ್ಲ. ಅದಕ್ಕೆ  ದತ್ತು ತೊಗೊಳ್ತಾರೆ.ಕಾಂಗ್ರೆಸ್ ಪಕ್ಷದವರು ಯಾರು ಪಕ್ಷ ಬಿಟ್ಟು ಹೋಗುವುದಿಲ್ಲ  ಎಂದು ಲೇವಡಿ ಮಾಡಿದರು.
 
ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಸಂಸ್ಕ್ರತಿ ಮರೆತ ಮನುಷ್ಯ. ಅವರ ಹೇಳಿಕೆ ಅವರ ಯೋಗ್ಯತೆಯನ್ನು ತೋರಿಸುತ್ತದೆ. ಇದರಿಂದ ಸಿಎಂ ಸಿದ್ದರಾಮಯ್ಯ ಘನತೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದರು.
 
ಬಿಜೆಪಿಯವರು ಪರಿವರ್ತನೆ ಯಾತ್ರೆ ವಿಫಲತೆಯಿಂದಾಗಿ ಹತಾಷರಾಗಿದ್ದಾರೆ. ಆದ್ದರಿಂದ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ವಿನಯ್ ಕುಲ್ಕರ್ಣಿ ವಾಗ್ದಾಳಿ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ