ತಹಸೀಲ್ದಾರ್ ಅಪಹರಣ ಶಂಕೆ..!

ಶುಕ್ರವಾರ, 3 ಆಗಸ್ಟ್ 2018 (16:00 IST)
ತಹಸೀಲ್ದಾರ್ ವೊಬ್ಬರು ಚಾಲನೆ ಮಾಡುತ್ತಿದ್ದ ಕಾರ್ ಪತ್ತೆಯಾಗಿದ್ದು, ತಹಸೀಲ್ದಾರ್ ಅಪಹರಣ ಶಂಕೆ ವ್ಯಕ್ತವಾಗಿದೆ.
ಮೈಸೂರು ಜಿಲ್ಲೆಯ ಕೆ.ಆರ್.ಪೇಟೆ ತಹಶೀಲ್ದಾರ್ ಮಹೇಶ್ಚಂದ್ರ ಅಪಹರಣ ಶಂಕೆ ವ್ಯಕ್ತವಾಗಿದೆ. ಹಾಸನ -ಮೈಸೂರು ಹೆದ್ದಾರಿಯಲ್ಲಿ ಅಪಹರಿಸಿರುವ ಶಂಕೆಯಿದೆ.

ಕೆ.ಆರ್.ನಗರದ ಚಿಕ್ಕವಡ್ಡರಗುಡಿ ಗ್ರಾಮದ ಬಳಿ ಸ್ಥಳದಲ್ಲಿ ತಹಸೀಲ್ದಾರ್ ಚಾಲನೆ ಮಾಡುತ್ತಿದ್ದ ಕಾರ್‌ ಪತ್ತೆಯಾಗಿದೆ. ಮಾರುತಿ ಓಮನಿ ಕಾರ್ ಹಾಗೂ ಶೂ ಪತ್ತೆಯಾಗಿದ್ದು, ಮುಖ್ಯ ರಸ್ತೆಯಲ್ಲಿ ಶೂ ಬಿದ್ದಿರುವ ಕಾರಣ, ತಹಸೀಲ್ದಾರ್ ರನ್ನ ಅಪಹರಣ ಮಾಡಿರುವ ಶಂಕೆ ಬಲವಾಗಿದೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಕೆ.ರಘು, ಸಾಲಿಗ್ರಾಮ ಎಸ್.ಐ ಮಹೇಶ್ ಭೇಟಿ ಪರಿಶೀಲಿನೆ ನಡೆಸಿದ್ದಾರೆ. ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ