ಆನಂದ ಅಸ್ನೋಟಿಕರ್ ಎಲ್ಲಿದ್ದ, ಎಲ್ಲಿಗೆ ಕೊಂಡೊಯ್ದಿರುವೆ ಎಂದು ಟಾಂಗ್ ನೀಡಿದ ಸಚಿವ

ಸೋಮವಾರ, 27 ಮೇ 2019 (17:39 IST)
ಆನಂದ ಅಸ್ನೋಟಿಕರ್ ಗೆ ನನ್ನ ಬಗ್ಗೆ ಮಾತಾಡಲು ಅಧಿಕಾರ ಇಲ್ಲ. ಅವನು ಎಲ್ಲಿದ್ದ? ನಾನು ಅವನಿಗೆ ಎಲ್ಲಿಗೆ ಕೊಂಡೊಯ್ದಿದ್ದೆ ಎಂಬುದನ್ನು ನೆನಪಿಸಿಕೊಳ್ಳಲಿ ಅಂತ ಸಚಿವರೊಬ್ಬರು ಟಾಂಗ್ ನೀಡಿದ್ದಾರೆ.

ಆನಂದ ಅಸ್ನೋಟಿಕರ್ ಗೆ ಸಚಿವ ಆರ್‌.ವಿ ದೇಶಪಾಂಡೆ ತಿರುಗೇಟು ನೀಡಿದ್ದಾರೆ. ಆರ್.ವಿ ದೇಶಪಾಂಡೆ ಅವರ ವಿರುದ್ಧ ಆನಂದ ಅಸ್ನೋಟಿಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಆನಂದ್ ಅವರ ತಂದೆ ಕೊಲೆ ಆದಾಗ ಅವರ ತಾಯಿ ಅಳುತ್ತಿದ್ದರು.
ಅವರ ತಾಯಿಯನ್ನ ಎಂಎಲ್.ಸಿ ಮಾಡಿದೆ. ಆನಂದ ಅಸ್ನೋಟಿಕರ್ ಅವರನ್ನ ಎಂ.ಎಲ್.ಎ ಮಾಡಿದೆ.

ಅವನು ಆಪರೇಷನ್ ಕಮಲಕ್ಕೆ ಹೋದ. ನನ್ನ ಬಗ್ಗೆ ಮಾತಾಡುವ ಯಾವ ನೈತಿಕತೆ ಅಧಿಕಾರ ಅವನಿಗಿಲ್ಲ. ಇನ್ನು ರಾಜಕೀಯದಲ್ಲಿ ಸಣ್ಣವನು.. ಹೀಗೆಲ್ಲ ಮಾತಾಡಬಾರದು ಎಂದರು.

ಇನ್ನು ಉತ್ತರ ಕನ್ನಡದಲ್ಲಿ ಜೆಡಿಎಸ್ ಪಕ್ಷ ಸಂಘಟನೆಯೇ ಇಲ್ಲ. ಬೇಡ ಎಂದು ಅಂದೇ ಕಾಂಗ್ರೆಸ್ ಹೈಕಮಾಂಡ್ ಗೆ ದೇವೇಗೌಡರಿಗೆ ಹೇಳಿದ್ದೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ