ಶಿಕ್ಷಕ ಚಿನ್ಮಯಾನಂದ ಮೂರ್ತಿ ಅಮಾನತು

ಶನಿವಾರ, 17 ಡಿಸೆಂಬರ್ 2022 (19:28 IST)
ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿ ಮುಖ್ಯ ಶಿಕ್ಷಕ ಚಿನ್ಮಯಾನಂದ ಮೂರ್ತಿ ಅಮಾನತು ಮಾಡಿ ಡಾ.ಆರ್.ವಿಶಾಲ್ ಆದೇಶ ಹೊರಡಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕಟ್ಟೇರಿಯಲ್ಲಿ ಮುಖ್ಯ ಶಿಕ್ಷಕನಿಗೆ ದೌರ್ಜನ್ಯದಿಂದ ನೊಂದು ವಿದ್ಯಾರ್ಥಿನಿಯರು ಮನಬಂದಂತೆ ಥಳಿಸಿದ್ದರು. ಆರೋಪಿ ಮುಖ್ಯ ಶಿಕ್ಷಕನ ಬಂಧಿಸಿ, ಪೊಲೀಸರು FIR ದಾಖಲಿಸಿದ್ರು. ಇದೀಗ ಶಿಕ್ಷಕ ಚಿನ್ಮಯಾನಂದ ಮೂರ್ತಿ ಸೇವೆಯಿಂದ ಅಮಾನತು ಮಾಡಿ ಆತನನ್ನ ದಕ್ಷಿಣ ಕನ್ನಡ ಜಿಲ್ಲೆಗೆ ಸ್ಥಳಾಂತರ ಮಾಡಿ ಎಂದು ಡಾ.ಆರ್.ವಿಶಾಲ್ ಆದೇಶ ಹೊರಡಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ