ರಂಗನಾಥಸ್ವಾಮಿ ದೇವಾಲಯದಲ್ಲೇ ನಡೆಯಿತು ಆ ಕೆಲಸ

ಶನಿವಾರ, 7 ಸೆಪ್ಟಂಬರ್ 2019 (17:39 IST)
ದೇವಸ್ಥಾನ, ದೇವರು ಎಂಬ ಭಯವಿಲ್ಲದವರು ದೇವರ ಸನ್ನಿಧಾನದಲ್ಲೇ ಆ ಕೆಲಸ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ  ಶಿಡ್ಲಘಟ್ಟ ತಾಲ್ಲೂಕಿನ ವರದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ದೇವಸ್ಥಾನದ ಬೀಗ ಮುರಿದು ನಗ- ನಾಣ್ಯ ದೋಚಿದ್ದಾರೆ ಕಳ್ಳರು.  

ವರದಹಳ್ಳಿ ಗ್ರಾಮದ ರಂಗನಾಥಸ್ವಾಮಿ ದೇವಾಲದಲ್ಲಿ ಘಟನೆ ನಡೆದಿದ್ದು, ಲಕ್ಷಾಂತರ‌ ರೂಪಾಯಿ ದೋಚಿದ್ದಾರೆ ಕಳ್ಳರು.  
ಶಿಡ್ಲಘಟ್ಟದಲ್ಲಿ ಇದುವರೆಗೆ ಹತ್ತು ದೇವಸ್ಥಾನಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

ಈ ಕುರಿತು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ