ಕೈ-ಕಮಲ ಮಧ್ಯದಲ್ಲಿ 3ನೇ ಶಕ್ತಿ ಅಗತ್ಯವಿದೆ-ಸಿ.ಎಂ.ಇಬ್ರಾಹಿಂ,

ಸೋಮವಾರ, 28 ಆಗಸ್ಟ್ 2023 (18:40 IST)
ಬಿಜೆಪಿ-ಕಾಂಗ್ರೆಸ್ ಮಧ್ಯದಲ್ಲಿ ಮೂರನೇ ಶಕ್ತಿ ಅಗತ್ಯವಿದೆ. ಒಂದನೇ ತಾರೀಖಿನಿಂದ ರಾಜ್ಯಾದ್ಯಂತ ಪ್ರವಾಸ ಮಾಡ್ತೀವಿ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆ ವರದಿಯನ್ನು ಸಮಿತಿಗೆ ಒಪ್ಪಿಸ್ತೇವೆ. ಈಗಾಗಲೇ ಬರಗಾಲ ಬರುವ ಸೂಚನೆ ಇದೆ ಏನೂ ಕ್ರಮ ಆಗಿಲ್ಲ. ಬಿತ್ತನೆ ಆಗಿಲ್ಲ, ಬೀಜ ಗೊಬ್ಬರ ಹಾಳಾಗಿ ಹೋಗಿದೆ. ಜಿಲ್ಲಾವಾರು ಮಂತ್ರಿಗಳನ್ನ ಮಾಡಿದ್ದಾರೆ. ರಿಪೋರ್ಟ್ ತಗೊಂಡು ಕೂಡಲೇ ಕ್ರಮ ಜರುಗಿಸಬೇಕು. ಅನೇಕ ಕಡೆ ಪಕ್ಷಕ್ಕೆ ಸೇರ್ಪಡೆಯಾಗ್ತಿದ್ದಾರೆ. ಈ ತಿಂಗಳಲ್ಲಿ ರಾಜ್ಯಕ್ಕೆ, ದೇಶಕ್ಕೆ ಒಳ್ಳೆದಾಗಲಿ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ