ಅರಮನೆ ಮೈದಾನದಲ್ಲಿ ಕಸದ ರಾಶಿ, ಸ್ವಚ್ಛತೆ ಮರೆತ ಬಿಜೆಪಿ

ಸೋಮವಾರ, 5 ಫೆಬ್ರವರಿ 2018 (09:10 IST)

ಸ್ವಚ್ಛ ಭಾರತದ ಮಾತನಾಡುವ ಬಿಜೆಪಿಯವರು ಅರಮನೆ ಮೈದನಾದಲ್ಲಿ  ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಸ್ವಚ್ಛತೆಯನ್ನು ಮರೆತಿದ್ದಾರೆ.

ಕಾರ್ಯಕ್ರಮದ ನಂತರ ಅರಮನೆ ಮೈದಾನದ ತುಂಬಾ ಕಸದ ರಾಶಿ ಬಿದ್ದಿದೆ. ಮೈದಾನದಲ್ಲಿ  ಎಲ್ಲಿ ನೋಡಿದರೂ ಕಸವೇ ಬಿದ್ದಿದೆ.

ವೇದಿಕೆ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತದ ಬಗ್ಗೆ ದೊಡ್ಡದಾಗಿ ಮಾತನಾಡುವ ಬಿಜೆಪಿಯವರು ಸ್ವಚ್ಛತೆಯನ್ನೇ ಮರೆತರಾ ಎನ್ನುವ ಪ್ರಶ್ನೆ ಎದ್ದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ