ಭಯದ ವಾತಾವರಣ ಸೃಷ್ಠಿಸುವ ಬಿಜೆಪಿಯವರು ಜಿಹಾದಿಗಳು– ದಿನೇಶ್ ಗುಂಡೂರಾವ್

ಗುರುವಾರ, 11 ಜನವರಿ 2018 (14:38 IST)
ಬಿಜೆಪಿ, ಭಜರಂಗದಳ, ಆರ್‍ಎಸ್‍ಎಸ್, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಯದ ವಾತಾವರಣ ಸೃಷ್ಟಿಸುತ್ತಿದ್ದು, ಅವರನ್ನು ಜಿಹಾದಿಗಳೆನ್ನದೆ ಏನೆಂದು ಕರೆಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತೊಮ್ಮೆ ಗುಡುಗಿದ್ದಾರೆ.
 
ನಿನ್ನೆ ನೀಡಿದ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನರೇಶ್ ಮೇಸ್ತಾ ಪ್ರಕರಣದಲ್ಲಿ ಬೀದಿಗಿಳಿಯುವ ಬಿಜೆಪಿಯವರು ಧನ್ಯಶ್ರೀ ಸಾವಿನ ಬಗ್ಗೆ ಏಕೆ ಬೀದಿಗಿಳಿಯಲಿಲ್ಲ ಎಂದು ಪ್ರಶ್ನಿಸಿದ್ದಾರೆ.
 
ಹಿಂದುತ್ವದ ಐಡಿಯಾಲಜಿ ದೇಶವನ್ನು ಬದಲಾಯಿಸುತ್ತಿದೆ. ಇದು ಖಂಡನೀಯವಾದುದ್ದು, ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ ಅವರು ಪಿಎಫ್‍ಐ ಬ್ಯಾನ್ ಮಾಡುವಂತೆ ಒತ್ತಾಯಿಸಿ ಪ್ರಧಾನಿ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳಲಿ. ಬ್ಯಾನ್ ಮಾಡುವ ಅಧಿಕಾರವಿರುವುದು ಕೇಂದ್ರಕ್ಕೆ ಮಾತ್ರ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ