ಉಪಚುನಾವಣೆಯ ಹಿನ್ನಲೆ; ಮತದಾರರನ್ನು ಸೆಳೆಯಲು ಹೆಚ್.ಡಿ.ಕೆ ಹೊಸ ಪ್ಲ್ಯಾನ್

ಗುರುವಾರ, 28 ನವೆಂಬರ್ 2019 (11:43 IST)
ಬೆಂಗಳೂರು : ರಾಜ್ಯದಲ್ಲಿ 15 ಕ್ಷೇತ್ರಗಳ ಉಪಚುನಾವಣೆಯ ಹಿನ್ನಲೆ ಮತದಾರರನ್ನು ಸೆಳೆಯಲು ಹೆಚ್.ಡಿ.ಕುಮಾರಸ್ವಾಮಿ ಹೊಸ ಪ್ಲ್ಯಾನ್ ಮಾಡಿದ್ದಾರೆ.




ಸಮಾವೇಶ ನಡೆಸಿ  ಮೈತ್ರಿ ಸರ್ಕಾರ ಅಸ್ಥಿರವಾಗಲು ಕಾರಣಗಳೇನು? ಎಂದು ಮತದಾರರಿಗೆ ತಿಳಿಸಲು ಕುಮಾರಸ್ವಾಮಿ ನಿರ್ಧಾರ ಮಾಡಿದ್ದು, ಹೀಗಾಗಿ 3-4 ಕ್ಷೇತ್ರಗಳಲ್ಲಿ ಸಮಾವೇಶ ಮಾಡಲು ಮುಂದಾಗಿದ್ದಾರೆ.


ಕೆ.ಆರ್.ಪೇಟೆ, ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ ನಡೆಸಲು ನಿರ್ಧಾರಿಸಿದ್ದು,  ಡಿಸೆಂಬರ್ 2,3 ರಂದು ಜೆಡಿಎಸ್ ಬೃಹತ್ ಸಮಾವೇಶ ನಿಗದಿಯಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ