ಚಿಲುಮೆಗೆ ಅನುಮತಿಗೆ ಕೊಟ್ಟಿದೆ ಕಾಂಗ್ರೆಸ್ ಎಂದು ತಿರುಗೇಟು ನೀಡಿದ ಸಿಎಂ

ಭಾನುವಾರ, 20 ನವೆಂಬರ್ 2022 (16:25 IST)
ಮತದಾರರ ಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೇಸ್ ಆರೋಪಗಳನ್ನ ತಳ್ಳಿಹಾಕಿದ್ದಾರೆ .ಅಲ್ಲದೇ  ನಾವು ಚುನಾವಣಾಧಿಕಾರಿಗೆ ದೂರು‌ ಕೊಟ್ಡಿದೀವಿ.ದೂರಿನಲ್ಲಿ ಸಿದ್ದರಾಮಯ್ಯ ಹೆಸರನ್ನೂ ಸೇರಿಸಿದೀವಿ.ಚಿಲುಮೆಗೆ ಅನುಮತಿ ಕೊಟ್ಟಿದ್ದೇ ಕಾಂಗ್ರೆಸ್.ಎಲೆಕ್ಷನ್ ಕಮೀಷನ್ ಮಾಡುವ ಕೆಲಸದ ಹೊಣೆಯನ್ನು ಕಾಂಗ್ರೆಸ್ ನವರು ಚಿಲುಮೆಗೆ ಕೊಟ್ಟಿದ್ರು.ಕಾಂಗ್ರೆಸ್ ನಾಯಕರೂ ಚಿಲುಮೆಯನ್ನು ಏಜೆನ್ಸಿಯಾಗಿ ಬಳಕೆ ಮಾಡಿಕೊಂಡಿದ್ದಾರೆ.ಕಾಂಗ್ರೆಸ್ ನವರು ನಮ್ಮ ಮೇಲೆ ರಾಜಕೀಯ ಪ್ರೇರಿತ ಆರೋಪ ಮಾಡ್ತಿದಾರೆ.ಎಲ್ಲ ಸತ್ಯ ಹೊರಗೆ ಬರಬೇಕು ಅಂತ 2013 ರಿಂದಲೂ ತನಿಖೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ.ಏನೋ ಒಂದು ದೊಡ್ಡ ಹಗರಣ ಸಿಕ್ತು ಅಂತ ಕಾಂಗ್ರೆಸ್ ನವರು ಅನ್ಕೊಂಡಿದ್ದಾರೆ.ಈ ಪ್ರಕರಣ ಅವರಿಗೇ ತಿರುಗುಬಾಣ ಆಗುತ್ತೆ ಎಂದು ಸಿಎಂ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ