ದಂಪತಿ ದೇಹದಾನ; ಸಾರ್ಥಕತೆ ಮೆರೆದ ಕುಟುಂಬ

ಶುಕ್ರವಾರ, 29 ಜೂನ್ 2018 (16:43 IST)
ಸಾಮಾನ್ಯವಾಗಿ ದಾನಗಳಲ್ಲಿ ಶ್ರೆಷ್ಟದಾನ ಅಂದ್ರೆ ನೇತ್ರದಾನ, ಅನ್ನದಾನ, ಅಂತಾರೆ, ಇತ್ತಿಚಿನ ದಿನಗಳಲ್ಲಿ ಯಾರಾದರೂ ಸತ್ತರೆ, ಮಣ್ಣು ಮಾಡುವುದು, ಸುಡುವುದು, ಅಂತ್ಯ ಸಂಸ್ಕಾರ ಮಾಡುತ್ತಾರೆ. ಆದರೆ ಇಲ್ಲೊಂದು ಕುಟುಂಬದ ಇಬ್ಬರ ದಂಪತಿಗಳ ಮೃತ ದೇಹವನ್ನ ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡಿದ್ದಾರೆ. 
 
 ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಕಣಬರ್ಗಿ ಗ್ರಾಮದ ಶಿವಾನಂದ ಪಂಚಾಕ್ಷರಿಮಠ, ಇವರು ಜಾತಿಯಲ್ಲಿ‌ ಸ್ವಾಮಿಗಳು. ಆದರೆ ಶಿವಾನಂದ ಅವರ ತಾಯಿ ಶಿವಲಿಲಾ ಅವರು ಜೂನ್ 17 ರಂದು ಪ್ಯಾರಾಲೆಸ್ ಕಾಯಿಲೆಯಿಂದ ಸಾವನ್ನಪ್ಪಿದರು. ಇನ್ನು ತಂದೆ ಮಹೇಶ ಪಂಚಾಕ್ಷರಿಮಠ  ಜೂನ್ 22 ರಂದು ಅನಾರೋಗ್ಯದಿಂದ  ಸಾವನ್ನಪಿದ್ದರು. ಆದರೆ ಅವರಿಬ್ಬರು 5 ವರ್ಷದ ಹಿಂದೆ ನಾವು ಸತ್ತ ಮೆಲೆ ನಮ್ಮ ದೆಹವನ್ನ ವೈದ್ಯಕೀಯ ಕಾಲೇಜಿಗೆ ದೆಹದಾನವನ್ನ ಮಾಡುವುದಾಗಿ ಬರೆದುಕ್ಕೊಟ್ಟಿದ್ದರು.

ಅದರಂತೆ ಮಗ ಶಿವಾನಂದ ಪಂಚಾಕ್ಷರಿಮಠ ಅವರು ವೃತ್ತಿಯಿಂದ ವೈದ್ಯರು, ಮಾತಿನಂತೆ ಇಬ್ಬರ ದೇಹವನ್ನ ಜವಹರಲಾಲ ನೆಹರೂ ವೈದ್ಯಕೀಯ ಕಾಲೆಜಿಗೆ ದೇಹದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ