ಬಿಜೆಪಿ ಆರೋಪ ಕಪೋಲಕಲ್ಪಿತ ಎಂದ ಡಿಸಿಎಂ

ಶನಿವಾರ, 24 ನವೆಂಬರ್ 2018 (19:27 IST)
ಫೋನ್ ಕದ್ದಾಲಿಕೆ ಕುರಿತು ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪದ ಕುರಿತು ಡಿಸಿಎಂ ತಿರುಗೇಟು ನೀಡಿದ್ದಾರೆ.

ಬಿಜೆಪಿ ಆರೋಪ ಕಪೋಲಕಲ್ಪಿತವಾಗಿದೆ. ಫೋನ್ ಕದ್ದಾಲಿಕೆಯಂತಹ ಯಾವುದೇ ಪ್ರಯತ್ನವನ್ನು ನಾವು ಮಾಡಿಲ್ಲ. ಹೀಗಂತ  ಮಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಸರ್ಕಾರ  ಟೇಕ್ ಆಫ್ ಆಗಿಲ್ಲ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು,  ಯಾವ ಅರ್ಥದಲ್ಲಿ ಅವರು ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ಅವರನ್ನು ವಿಚಾರಿಸುತ್ತೇನೆ ಎಂದರು.

ಇನ್ನು ರಾಮಮಂದಿರ ವಿಷಯವನ್ನು ಚುನಾವಣೆ ಬಂದಾಗ ಮಾತ್ರ ಎತ್ತಲಾಗುತ್ತಿದೆ. ಚುನಾವಣೆ ಹತ್ತಿರ ಬಂದಾಗ ಬಿಜೆಪಿಯವರು ರಾಮ ಮಂದಿರದ ವಿಷಯ ಎತ್ತಿದ್ದಾರೆ. ಇದು ಕೇವಲ ರಾಜಕೀಯ ನಾಟಕವಾಗಿದೆ. ಜನಗಳ ಭಾವನೆಗಳ ಜೊತೆ ಬಿಜೆಪಿ ಚೆಲ್ಲಾಟ ಆಡುತ್ತಿದೆ ಎಂದು ಟೀಕೆ ಮಾಡಿದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ