ಪ್ರಸಿದ್ಧಿ ಪಡೆದ ಎರಡು ಊರುಗಳ ರಥೋತ್ಸವ, ಜಾತ್ರೆ ದಿಢೀರ್ ರದ್ದು

ಗುರುವಾರ, 23 ಏಪ್ರಿಲ್ 2020 (22:15 IST)
ಹಲವಾರು ವರ್ಷಗಳ ಇತಿಹಾಸ ಹೊಂದಿರುವ ಎರಡು ಗ್ರಾಮಗಳ ರಥೋತ್ಸವ ಹಾಗೂ ಜಾತ್ರೆಯನ್ನು ದಿಢೀರ್ ಆಗಿ ರದ್ದುಗೊಳಿಸಲಾಗಿದೆ.

ಕೊರೋನಾ ವೈರಸ್ (ಕೊವೀಡ್-19) ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕಲಬುರಗಿ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ. ಸೆಕ್ಷನ್ 144 ರನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ.

ಇದರ ಹಿನ್ನೆಲೆಯಲ್ಲಿ ಏಪ್ರಿಲ್ 26 ರಂದು ನಡೆಯಲಿರುವ ಕಲಬುರಗಿ ತಾಲೂಕಿನ ಧರ್ಮಾಪುರ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ರಥೋತ್ಸವ, ಜಾತ್ರೆ ಹಾಗೂ ಏಪ್ರಿಲ್ 28 ರಂದು ನಡೆಯಲಿರುವ ನಂದೂರ (ಕೆ) ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಗ್ಗಿ (ಅಗ್ನಿ) ತುಳಿಯುವ ಕಾರ್ಯಕ್ರಮ, ಜಾತ್ರೆಯನ್ನು ರದ್ದುಪಡಿಸಲಾಗಿದೆ.     

ಕಲಬುರಗಿ ತಹಶೀಲ್ದಾರ ಮಲ್ಲೇಶ ತಂಗಾ ನೇತೃತ್ವದಲ್ಲಿ ಧರ್ಮಾಪುರ ಗ್ರಾಮದ ಶರಣಬಸವೇಶ್ವರ  ದೇವಸ್ಥಾನ ಸಮಿತಿ, ನಂದೂರ (ಕೆ) ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಮಿತಿ ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಈ ಎರಡೂ ಸಂಪೂರ್ಣವಾಗಿ ಜಾತ್ರೆಗಳನ್ನು ರದ್ದುಪಡಿಸುವ ಕುರಿತು ಈ ತೀರ್ಮಾನ ಕೈಗೊಳ್ಳಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ