ಕರವೇ ಜಿಲ್ಲಾ ಅಧ್ಯಕ್ಷರ ನಡುವೆ ಹೊಡೆದಾಟ

ಮಂಗಳವಾರ, 28 ಮೇ 2019 (17:31 IST)
ಕ್ಷುಲ್ಲಕ ಕಾರಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಎರಡು ಬಣದ ಜಿಲ್ಲಾ ಅಧ್ಯಕ್ಷರ ನಡುವೆ ಗಲಾಟೆ ನಡೆದಿದೆ.
ಚಿತ್ರದುರ್ಗದ 20 ನೇ ವಾರ್ಡ್ ನಲ್ಲಿ ಘಟನೆ ನಡೆದಿದೆ.

ಕರ್ನಾಟಕ ರಕ್ಷಣ ವೇದಿಕೆ ನಾರಾಯಣ ಗೌಡ ಬಣದ  ಜಿಲ್ಲಾ ಅಧ್ಯಕ್ಷ ರಮೇಶ್ ಹಾಗೂ ಶಿವರಾಮೆಗೌಡ ಬಣದ ಮಂಜುನಾಥ್ ನಡುವೆ ಗಲಾಟೆ ನಡೆದಿದೆ.

ನೀರಿನ ಪೈಪ್ ಲೈನ್ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಆಗ ರಮೇಶ್ ತಲೆಗೆ ಗಾಯವಾಗಿದೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎರಡು ಬಣದ ಜಿಲ್ಲಾ ಅಧ್ಯಕ್ಷರ ನಡುವೆ ಹಳೆ ದ್ವೇಷ ಹಿನ್ನೆಲೆ ಗಲಾಟೆ ಮರುಕಳಿಸಿದೆ. ಈ ಕುರಿತು ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ