ಮತ್ತಿನಲ್ಲಿದ್ದವನ ಕ್ವಾಟ್ಲೆಗೆ ಅಗ್ನಿಶಾಮಕ ದಳ, ಪೊಲೀಸರು ಹೈರಾಣ

ಶನಿವಾರ, 7 ಜನವರಿ 2023 (15:33 IST)
ಮತ್ತಿನಲ್ಲಿದ್ದವನ ಕ್ವಾಟ್ಲೆಯಿಂದ ಅಗ್ನಿಶಾಮಕ ದಳ ಮತ್ತು ಪೊಲೀಸರು ಹೈರಾಣಾಗಿ ಹೋಗಿದ್ರು.ಇನ್ನು ಈ ಘಟನೆ ಯಶವಂತಪುರದ ಎಂಇಐ ಸಿಗ್ನಲ್ ಬಳಿ ನಡೆದಿದೆ.ಗಾಂಜಾ ಮತ್ತಿನಲ್ಲಿ ಚರಂಡಿಯಿಂದ ಎದ್ದು ಇನ್ನೂ ಮೂವತ್ತು ಜನ ಒಳಗಿದ್ದಾರೆ ಎಂದು ಶಾಕ್ ಕೊಟ್ಟಿದ್ದ.ಗಾಬರಿಗೊಂಡ ಸ್ಥಳಿಯರಿಂದ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ.ಅಗ್ನಿಶಾಮಕ ದಳದೊಂದಿಗೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.ಶ್ರೀರಾಂಪುರದಿಂದ ಚರಂಡಿಯೊಳಗೆ ಬಂದಿದ್ದೀನಿ ಇನ್ನೂ 30 ಜನ ಒಳಗಿದ್ದಾರೆ ಎಂದು ಆಸಾಮಿ ಹೇಳಿದ.ಮತ್ತಿನಲ್ಲಿದವನನ್ನ ಆರ್.ಎಂ.ಸಿ ಯಾರ್ಡ್ ಠಾಣಾ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ