ತಂದೆ ಮಾಡಿದ ಸಾಲ ತೀರಿಸಿಲ್ಲವೆಂದು ಮಗನನ್ನು ಮರಕ್ಕೆ ಕಟ್ಟಿ ಥಳಿತ!

ಶನಿವಾರ, 7 ಜನವರಿ 2023 (13:37 IST)
ಕೊಪ್ಪಳ : ತಂದೆ ಮಾಡಿದ ಸಾಲ ಸಕಾಲಕ್ಕೆ ತೀರಿಸಿಲ್ಲ ಎಂಬ ಕಾರಣಕ್ಕೆ ಸಾಲ ಕೊಟ್ಟವರು ಮಗನಿಗೆ ಶಿಕ್ಷೆ ಕೊಟ್ಟಿದ್ದಾರೆ.

ಸಾಲ ಮರು ಪಾವತಿ ಮಾಡದಿರುವುದರಿಂದ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಅಮಾನುಷ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕೆ.ಹೊಸೂರು ಗ್ರಾಮದಲ್ಲಿ ನಡೆದಿದೆ.

ದೊಡ್ಡ ಬಸಪ್ಪ ಮಡಿವಾಳರ (14) ಎಂಬ ಬಾಲಕನಿಗೆ ಥಳಿಸಿದ ಆರೋಪ ಕೇಳಿ ಬಂದಿದೆ. 2022ರ ಡಿ.28 ರಂದು ಘಟನೆ ನಡೆದಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಇದರಿಂದ ಥಳಿತಕ್ಕೆ ಒಳಗಾದ ಬಾಲಕನ ತಾಯಿ ಮಂಜುಳಾ ಡಿ.31 ರಂದು ಎಸ್ಪಿಗೆ ದೂರು ನೀಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಂದೆ ಮರಿಯಪ್ಪ ಮಡಿವಾಳರ ಮಾಡಿದ ಸಾಲ ತೀರಿಸಿಲ್ಲ ಎಂದು ಸಾಲ ಕೊಟ್ಟವರು ನನ್ನ ಮಗನಿಗೆ ಥಳಿಸಿದ್ದಾರೆ ಎಂದು ಇದೀಗ ಈ ಬಗ್ಗೆ ಕನಕರಾಯ ಮಡಿವಾಳರ, ರಾಜೇಶ್ವರಿ ಮಡಿವಾಳರ, ವೀರಭದ್ರಪ್ಪ ಮಡಿವಾಳರ, ಗಂಗಮ್ಮ ಮಡಿವಾಳರ, ನಿರುಪಾದೆಪ್ಪ ಮಡಿವಾಳರ, ಬಸವರಾಜ ಮಡಿವಾಳರ ಎನ್ನುವವರ ವಿರುದ್ಧ ಬಾಲಕನ ತಾಯಿ ಮಂಜುಳಾ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ