ಮೆಜೆಸ್ಟಿಕ್ ನಿಂದ ಮೊದಲು ಬಸ್ ಶ್ರೀ ಮಂಜುನಾಥ ನಾ ಸನ್ನಿಧಿಗೆ ಹೊರಡಲು ಸಿದ್ದ

ಭಾನುವಾರ, 11 ಜೂನ್ 2023 (13:19 IST)
ಕೆಲವೇ ಕ್ಷಣಗಳಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲ್ಲಿದ್ದು, ಮಹಿಳೆಯರಿಗೆ ಟಿಕೆಟ್ ವಿತರಿಸುವ ಮೂಲಕ ಶಕ್ತಿ ಯೋಜನೆಗೆ ಸಿಎಂ ಚಾಲನೆ ನೀಡಿದ್ದು,ಈಗಾಗಲೇ KSRTS ಬಸ್ ನಿಲ್ದಾಣದಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ವೇದಿಕೆ ಸಿದ್ದತೆಯಾಗಿದೆ.KSRTS ಯ ಹೊಸ 9 ಬಸ್ ಗಳು ಸಿದ್ದತೆಯಾಗಿ ನಿಂತಿದ್ದು, ಬಸ್ ಗಳಲ್ಲಿ ಮಹಿಳೆಯರಿಗೆ  ಟಿಕೆಟ್  ನೀಡುವ ಮೂಲಕ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುತ್ತೆ.ಬಸ್ ನಿಲ್ದಾಣದಲ್ಲಿ ಚಂಡಿ ವಾದ್ಯದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಮೆಜೆಸ್ಟಿಕ್ ನಿಂದ ಮೊದಲು ಬಸ್ ಶ್ರೀ ಮಂಜುನಾಥ ನಾ ಸನ್ನಿಧಿಗೆ ಹೊರಡಲು ಸಿದ್ದವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ