ತಬ್ಲಿಘಿಗಳನ್ನು ಹುಡುಕಿ ಕೊಟ್ಟರೆ ನಗದು ಬಹುಮಾನ ಘೋಷಿಸಿದ ಸರಕಾರ

ಶನಿವಾರ, 11 ಏಪ್ರಿಲ್ 2020 (21:18 IST)
ಸರಕಾರ ತಬ್ಲಿಘಿಗಳನ್ನು ಹುಡುಕಿಕೊಟ್ಟವರಿಗೆ ಅಥವಾ ಅವರ ಕುರಿತು ಮಾಹಿತಿ ನೀಡಿದವರಿಗೆ ನಗದು ಬಹುಮಾನ ಕೊಡೋದಾಗಿ ಘೋಷಣೆ ಮಾಡಿದೆ.

ದೆಹಲಿಯ ನಿಜಾಮುದ್ದೀನ್ ಜಮಾತ್ ನಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮರಳಿದವರು ಕೆಲವರು ಈವರೆಗೂ ಪತ್ತೆಯಾಗುತ್ತಿಲ್ಲ. ಹೀಗಾಗಿ ಹೇಗಾದರೂ ಮಾಡಿ ತಪ್ಪಿಸಿಕೊಂಡಿರುವ ತಬ್ಲಿಘಿಗಳ ಪತ್ತೆಗೆ ಸರಕಾರ ಮುಂದಾಗಿದೆ.

ಪತ್ತೆಯಾಗದ ತಬ್ಲಿಘಿಗಳನ್ನು ಹುಡುಕಿಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ತಬ್ಲಿಘಿಗಳ ಕುರಿತು ಮಾಹಿತಿ ನೀಡಿದವರಿಗೆ 5 ಸಾವಿರ ರೂಪಾಯಿ ಬಹುಮಾನ ನೀಡೋದಾಗಿ ಉತ್ತರ ಪ್ರದೇಶದ ಪೊಲೀಸರು ಪ್ರಕಟ ಮಾಡಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ