ರಾಜ್ಯಪಾಲರು ಸ್ಪೀಕರ್ ಗೆ ಪತ್ರ ಬರಿಯೋ ಅಗತ್ಯವೇನಿತ್ತು?

ಶುಕ್ರವಾರ, 19 ಜುಲೈ 2019 (15:59 IST)
ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅಷ್ಟಕ್ಕೂ ರಾಜ್ಯಪಾಲರು ಸ್ಪೀಕರ್ ಗೆ ಪತ್ರ ಬರೆಯೋ ಅಗತ್ಯವೇನಿತ್ತು?

ಹೀಗಂತ ಮೈತ್ರಿ ಪಕ್ಷಗಳು ರಾಜ್ಯಪಾಲರ ಕ್ರಮವನ್ನು ಖಂಡಿಸಿವೆ. ವಿಧಾಸಭೆ ಕಲಾಪದಲ್ಲಿ ಮಾತನಾಡಿರೋ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ದಿನೇಶ್ ಗುಂಡೂರಾವ್ ರಾಜ್ಯಪಾಲರ ಕಚೇರಿ ದುರುಪಯೋಗ ಆಗುತ್ತಿದೆ ಎಂದು ಟೀಕೆ ಮಾಡಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅವರು ಹತ್ತು ದಿನಗಳವರೆಗೆ ವಿಶ್ವಾಸ ಮತ ಕುರಿತು ಚರ್ಚೆ ನಡೆಸಿದ್ದರು. ಇದೇ ಸದನದಲ್ಲಿ ಈ ಹಿಂದೆ ನಾಲ್ಕೈದು ದಿನಗಳವೆಗೆ ವಿಶ್ವಾಸ ಮತ ಕುರಿತು ಚರ್ಚೆ ನಡೆದಿತ್ತು. ಆದರೆ ಇದೀಗ ವಿಪಕ್ಷ ತರಾತುರಿ ಮಾಡ್ತಿರೋದು ಏಕೆ ಅಂತ ಪ್ರಶ್ನೆ ಮಾಡಿದ್ದಾರೆ.

ದೊಂಬರಾಟ ಆಡೋದಾಗಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆ ದೊಂಬರಾಟ ಏನು ಎಂದು ಪ್ರಶ್ನಿಸಿದ್ದಾರೆ.



 

 

 

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ