ಕುಮಾರಸ್ವಾಮಿ ಮೇಲೆ ಛಾಟಿ ಬೀಸಿದ ಗೌವರ್ನರ್?

ಗುರುವಾರ, 11 ಜುಲೈ 2019 (15:10 IST)
ಮೈತ್ರಿ ಸರಕಾರದ ಕೆಲವು ಶಾಸಕರು ರಾಜೀನಾಮೆ ನೀಡಿರೋ ಹಿನ್ನಲೆಯಲ್ಲಿ ರಾಜ್ಯಾಪಾಲರು ಸಿಎಂಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ನ ಹಲವು ಶಾಸಕರು ರಾಜೀನಾಮೆ ನೀಡಿದ್ದು, ಅಂತಿಮ ತೀರ್ಪು ಸ್ಪೀಕರ್ ಹಾಗೂ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ.

ಅತೃಪ್ತ ಶಾಸಕರ ರಾಜೀನಾಮೆ ವಿಷಯವಾಗಿ ಸ್ಪೀಕರ್ ಗೆ ಕೆಲವೊಂದು ಸೂಚನೆಗಳನ್ನು ಕೋರ್ಟ್ ನೀಡಿದೆ.

ಈ ನಡುವೆ ರಾಜ್ಯ ಸಚಿವ ಸಂಪುಟದ ಸಭೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆದಿದ್ದಾರೆ. ಹೀಗಾಗಿ ಸರಕಾರ ಯಾವುದೇ ಮಹತ್ವದ ಆಡಳಿತ ಕ್ರಮಗಳನ್ನು ಕೈಗೊಳ್ಳಬಾರದು ಎಂದು ರಾಜ್ಯಪಾಲರು ಸಿಎಂಗೆ ಆದೇಶ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ