ವಿಧಾನಸೌಧ ಗೇಟ್ ನಲ್ಲಿ ಹಣ ವಶ ಪ್ರಕರಣ: ಸಚಿವರಿಗೆ ಸಂಬಂಧವಿಲ್ಲ ಎಂದ ಹೋಮ್ ಮಿನಿಸ್ಟರ್

ಶನಿವಾರ, 5 ಜನವರಿ 2019 (19:44 IST)
ವಿಧಾನಸೌಧದ ವೆಸ್ಟ್ ಗೇಟ್ ನಲ್ಲಿ 25.73 ಲಕ್ಷ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದು, ಸಚಿವರಿಗೆ ಸಂಬಂಧವಿಲ್ಲ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದು, ಮಿನಿಸ್ಟರ್ ಆಫೀಸ್ ನಲ್ಲಿ ಡ್ರೈವರ್ ಇರ್ತಾರೆ,  ಪಿಎ, ಸಿಬ್ಬಂದಿ ಇರ್ತಾರೆ. ಅವರೆಲ್ಲಾ ಈ ರೀತಿ ಮಾಡಿದ್ರೆ ಸಚಿವರಿಗೇನು ಸಂಬಂಧ? ಎಂದರು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ  ಸಂಬಂಧಪಟ್ಟ ಸಚಿವರು ಹೇಳಿಕೆ ಕೊಡುತ್ತಾರೆ. ಅದಾಗಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಇನ್ನು ಚಡಚಣ ನಕಲಿ ಎನ್ ಕೌಂಟರ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಈಗಾಗಲೇ ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ಚಾಜ್೯ ಸೀಟ್ ಸಲ್ಲಿಕೆಯಾಗಿವೆ.

ಅಲ್ಲದೆ ಇನ್ನೊಂದು ಹೆಚ್ಚುವರಿ ಚಾಜ್೯ ಸೀಟ್ ಸಲ್ಲಿಕೆಗೆ ತಯಾರಿ ನಡೆದಿದೆ. ನಮ್ಮ ಸಿಐಡಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಗೌರಿ ಲಂಕೇಶ್ ಹಾಗೂ ಕಲಬುರ್ಗಿ ಕೇಸ್ ನಲ್ಲಿ ಕೂಡ ನಮ್ಮ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆ ಕೇಸ್ ಈಗಾಗಲೇ ಅಂತಿಮ ಘಟ್ಟದಲ್ಲಿದೆ ಎಂದು ತಿಳಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ