ಮಾದಿಗ ಸಭೆಯಲ್ಲಿ ಜಟಾಪಟಿ

ಶುಕ್ರವಾರ, 4 ಜನವರಿ 2019 (15:03 IST)
ಚಿತ್ರದುರ್ಗ ಜಿಲ್ಲಾ ಮಾದಿಗ ಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ.

ಆದಿ ಜಾಂಬವ ನಿಗಮದ ಸ್ಥಾಪನೆ ಕುರಿತು ಪೂರ್ವ ಭಾವಿ ಸಭೆ ಆಯೋಜಿಸಲಾಗಿತ್ತು. ಚಿತ್ರದುರ್ಗ ನಗರದ ಕ್ರೀಡಾ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಮಾಜ ಕಲ್ಯಾಣ ಮಾಜಿ ಮಂತ್ರಿ ಹೆಚ್.ಆಂಜನೇಯ ಮತ್ತು ಜಿ.ಎಸ್. ಮಂಜುನಾಥ್ ನಡುವೆ ಮಾತಿನ ಚಕಮಕಿ ನಡೆಯಿತು.

ಎಚ್.ಆಂಜನೇಯ ಭಾಷಣ ಮುಗಿಯುತ್ತಿದ್ದಂತೆ ನಾನು ಮಾತನಾಡುವೆ ಎಂದು ಮಂಜುನಾಥ್ ಹೇಳಿದರು. ಆಗ
ಕಾಂಗ್ರೇಸ್ ಮುಂಖಂಡ ಮಂಜುನಾಥ್ ಹಾಗೂ ಆಂಜನೇಯ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.

ನಿನ್ನೆ ಅಷ್ಟೇ ಜಿ. ಎಸ್. ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ ಆಂಜನೇಯ ವಿರುದ್ಧ ಮಾತನಾಡಿದ್ದರು. ಮಾತಿನ ಚಕಮಕಿ ಸಂದರ್ಭದಲ್ಲಿ ಮಾದಿಗ ಆದಿ ಜಾಂಬವ ನಿಗಮಕ್ಕೆ ಮಂಜುನಾಥ್ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಸಭೆ ಗೊಂದಲದ ಗೂಡಾಯಿತು. ಪೊಲೀಸರು ಮಧ್ಯ ಪ್ರವೇಶ ಮಾಡಿ ಗಲಾಟೆ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ