ಹಸಿದ ಬಡ ಜನರಿಗೆ ಆಹಾರ ಬೇಕೇ ಹೊರತು ರಂಗುರಂಗಿನ ಭಾಷಣ ಅಲ್ಲ- ಸೋನಿಯಾ ಗಾಂಧಿ

ಬುಧವಾರ, 9 ಮೇ 2018 (14:22 IST)
ವಿಜಯಪುರ : 'ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳಿಂದ ಯಾವತ್ತೂ ಹೊಟ್ಟೆ ತುಂಬುವುದಿಲ್ಲ. ಹಸಿದ ಬಡ ಜನರಿಗೆ ಆಹಾರ ಬೇಕೇ ಹೊರತು ರಂಗುರಂಗಿನ ಭಾಷಣ ಅಲ್ಲ’ ಎಂದು ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ  ನಡೆಸಿದ್ದಾರೆ.


ಎರಡು ವರ್ಷಗಳ ಬಳಿಕ ಚುನಾವಣಾ ಪ್ರಚಾರ ಕಣಕ್ಕೆ ಇಳಿದ ಸೋನಿಯಾ ಗಾಂಧಿ ಅವರು ಇಂದಿಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ,’ ಮೋದಿ ಜೀ ಅವರಿಗೆ ತಾನೋರ್ವ ಅತ್ಯುತ್ತಮ ಭಾಷಣಕಾರ ಎಂಬ ಬಗ್ಗೆ ಹೆಮ್ಮೆ ಇದ್ದಂತಿದೆ. ನಾನದನ್ನು ಒಪ್ಪುತ್ತೇನೆ. ಅವರೊಬ್ಬ ನಟನ ಹಾಗೆ ಮಾತನಾಡುತ್ತಾರೆ. ಅವರ ಭಾಷಣಗಳಿಂದ ಒಂದೊಮ್ಮೆ ದೇಶದ ಬಡಜನರ ಹೊಟ್ಟೆ ತುಂಬುವುದಾದರೆ ನಾನು ನಿಜಕ್ಕೂ ಸಂತಸ ಪಡುತ್ತೇನೆ. ಆದರೆ ಭಾಷಣಗಳಿಂದ ಯಾವತ್ತೂ ಹೊಟ್ಟೆ ತುಂಬುವುದಿಲ್ಲ ಎನ್ನುವುದು ಪರಮ ಸತ್ಯ. ಹಸಿದ ಬಡ ಜನರಿಗೆ ಆಹಾರ ಬೇಕೇ ಹೊರತು ರಂಗುರಂಗಿನ ಭಾಷಣ ಅಲ್ಲ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ