ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದ ನಟ ಯಶ್

ಸೋಮವಾರ, 7 ಮೇ 2018 (06:52 IST)
ವಿಜಯಪುರ : ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಮತಯಾಚಿಸಲು ತಾನು ಬಾದಾಮಿ ಕ್ಷೇತ್ರಕ್ಕೆ  ಹೋಗುವುದಿಲ್ಲವೆಂದು ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಹೇಳಿದ್ದಾರೆ.


ವಿಜಯಪುರದ ತಿಕೋಟಾದಲ್ಲಿ ಮಾತನಾಡಿದ ಯಶ್ ಅವರು,’ ಜಿದ್ದಾಜಿದ್ದನ ಕ್ಷೇತ್ರದಲ್ಲಿ ನಾವು ಹೋಗಿ ಏನು ಮಾಡುವಂತಿಲ್ಲ. ರಾಜಕೀಯ ರಾಜಕೀಯವಾಗಿ ನಡೆಯಬೇಕು ಎಂದರು. ಇನ್ನು ಜನ ಯಾರನ್ನು ಪ್ರೀತಿಸಿ ಗೆಲ್ಲಿಸ್ತಾರೆ ಅವರೇ ಆಯ್ಕೆ ಆಗುತ್ತಾರೆ. ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿಲ್ಲ’ ಎಂದು ತಿಳಿಸಿದ್ದಾರೆ.


ಹಾಗೇ’ ಬಾದಾಮಿಯಲ್ಲಿ ನಾನು ಪ್ರಚಾರಕ್ಕೆ ಹೋಗುತ್ತಿಲ್ಲ ಸಿಎಂ ಸಿದ್ದರಾಮಯ್ಯ ಹಾಗೂ ಶ್ರೀರಾಮಲು ಅವರ ಪರಿಚಯ ನನಗಿದೆ. ಇವರಿಬ್ಬರು ಪರಿಚಯವಿರುವ ಕ್ಷೇತ್ರ ಹಾಗೂ ಜಿದ್ದಾಜಿದ್ದಿ ಕ್ಷೇತ್ರಗಳಿಗೆ ನಾನು ಹೋಗುವುದಿಲ್ಲ. ಅಲ್ಲಿ ನಾನು ಮಾಡುವಂಥದ್ದು ಏನೂ ಇರಲ್ಲ. ರಾಜಕೀಯವಾಗಿ ವಾತಾವರಣ ಸರಿಯಿಲ್ಲದ ಕ್ಷೇತ್ರಗಳಿಗೆ ನಾನು ಹೋಗಲ್ಲ ಎಂದು ನಟ ಯಶ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ