ಸರಕಾರ ಬೀಳ್ತಿಸಿರೋರಿಗೆ ಸೌಜನ್ಯ ಇರಬೇಕು ಎಂದ ಜೆಡಿಎಸ್ ಮುಖಂಡ

ಬುಧವಾರ, 16 ಜನವರಿ 2019 (15:19 IST)
ಸಮ್ಮಿಶ್ರ ಸರಕಾರ ಬೀಳಿಸುತ್ತಿರುವ ಶಾಸಕರಿಗೆ ಸೌಜನ್ಯ ಇರಬೇಕು. 224 ಶಾಸಕರುಗಳಿಗೆ ಮಂತ್ರಿ ಸ್ಥಾನ ಕೊಡಲಿಕ್ಕೆ ಆಗಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಪಕ್ಷಾಂತರ ಮಾಡುವ ಶಾಸಕರಿಗೆ ಆ ಕ್ಷೆತ್ರದ ಜನ ಕ್ಷೇತ್ರದಲ್ಲಿ ಕಾಲಿಡದಂತೆ ನೋಡಿಕೊಳ್ಳಬೇಕು. ಶಾಸಕರು ಅತೀ ಆಸೆ ಮಾಡುತ್ತಿದ್ದಾರೆ. ಎಲ್ಲ ಶಾಸಕರು ಹೇಳಿದ ಹಾಗೆ ಸಿಎಂ ಹೇಗೆ ಮಾಡಲಿಕ್ಕೆ ಆಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾಗುವುದು ಸಹಜ ಅದರಲ್ಲೇನಿದೆ ಎಂದ ಅವರು, ಅಧಿಕಾರ ಇದ್ದಾಗ ಕೆಲಸ ಮಾಡಿ, ರಾಜ್ಯಕ್ಕೆ ಒಳ್ಳೆ ಹೆಸರು ತನ್ನಿ. ಸರಕಾರಕ್ಕೆ ಏನು ಆಗಲ್ಲ, ಕೆಲವು ಶಾಸಕರು ಅರಬಿ ಹಾವು ಬಿಡುತ್ತಿದ್ದಾರೆ.
ಹೋದರೆ ಹೋಗಲಿ ಏನು ಮಾಡಲಿಕ್ಕೆ ಆಗುತ್ತದೆ ಎಂದರು.

ಕಾಂಗ್ರೆಸ್ ನವರ ಎಲ್ಲ ಬೇಡಿಕೆಗಳನ್ನು ಹಂಚುವಲ್ಲಿ ಸಮಸ್ಯೆ ಆಗಿದ್ದು ನಿಜ ಎಂದ ಹೊರಟ್ಟಿ ಹೇಳಿದರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ