ಕೊನೆಗೂ ಬೋನಿಗೆ ಬಿದ್ದ ಚಿರತೆ

ಗುರುವಾರ, 28 ಏಪ್ರಿಲ್ 2022 (19:35 IST)
ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ. ಮಂಡ್ಯದ ಮದ್ದೂರು ತಾಲೂಕಿನ ಬೊಪ್ಪಸಮುದ್ರದಲ್ಲಿ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ. ಈ ಚಿರತೆ ಸುತ್ತಮುತ್ತಲಿನ ಗ್ರಾಮದಲ್ಲಿ ಕುರಿ,ಮೇಕೆ, ನಾಯಿ ಮೇಲೆ ದಾಳಿ ನಡೆಸಿತ್ತು. ಜೊತೆಗೆ ಜನರ ಪ್ರಾಣಕ್ಕೂ ಸಹ ಕುತ್ತು ತಂದಿತ್ತು. ಈಗಾಗಿ ಜನರಿಗೆ ಚಿರತೆ ದೊಡ್ಡ ತಲೆನೋವಾಗಿತ್ತು. ಗ್ರಾಮಸ್ಥರು ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿದರು. ಮನವಿಗಾಗಿ ಅರಣ್ಯ ಇಲಾಖೆ ಬೋನನ್ನು ಇಟ್ಟಿತ್ತು. ಇಂದು ಚಿರತೆ ಬೋನಿಗೆ ಬಿದ್ದಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತು ಬೋನಿಗೆ ಬಿದ್ದ ಚಿರತೆ ನೋಡಲು ತುಂಬಾ ಜನ ಸೇರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ