ಸಿದ್ದರಾಮಯ್ಯ ಸುತ್ತ ಸಚಿವ ಆಕಾಂಕ್ಷಿಗಳ ಚಿತ್ತ

ಶುಕ್ರವಾರ, 5 ಅಕ್ಟೋಬರ್ 2018 (19:48 IST)
ಕಾಂಗ್ರೆಸ್ -  ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭಗೊಂಡಿರುವಂತೆ ಸಚಿವ ಆಕಾಂಕ್ಷಿಗಳು ಸಮನ್ವಯ ಸಮಿತಿ ಅಧ್ಯಕ್ಷರತ್ತ ಚಿತ್ತ ಹರಿಸಿದ್ದಾರೆ.

ಒಂದೆರಡು ದಿನ ಯಾರ ಭೇಟಿಗೂ ಅವಕಾಶ ನೀಡದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ನಿವಾಸ ಇಂದು ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಶಾಸಕರಾದ ಡಾ.ಕೆ.ಸುಧಾಕರ, ತುಕಾರಾಂ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಸೇರಿದಂತೆ ಅನೇಕ ಮುಖಂಡರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಸಂಪುಟದಲ್ಲಿ ಸ್ಥಾನ ಪಡೆಯಲು ಹಲವು ಮುಖಂಡರು ಸಿದ್ದರಾಮಯ್ಯನವರ ಬೆಂಬಲ ಕೋರಲು ಆಗಮಿಸಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ