ಬೆಂಗಳೂರಿನಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇವರ ವಿಗ್ರಹ ಭಗ್ನಗೊಳಿಸಿದ ಕಿಡಿಗೇಡಿಗಳು

ಸೋಮವಾರ, 13 ನವೆಂಬರ್ 2023 (16:00 IST)
ಬೆಂಗಳೂರಿನಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇವರ ವಿಗ್ರಹ ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬಲಮುರಿ ದೇವಸ್ಥಾನದಲ್ಲಿ ನಡೆದಿದೆ.
 
ಬಲಮುರಿ ದೇವಸ್ಥಾನದ ಕಟ್ಟಡದಲ್ಲಿ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹವಿದ್ದು,ಗೋಪುರದ ಮೇಲ್ಭಾಗದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ‌ ಹಿಡಿದಿರುವ ಆಯುಧವನ್ನ ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ.ಕಳೆದ 8 ನೇ ತಾರೀಖು ವಿಗ್ರಹ ಭಗ್ನಗೊಳಿಸಿರುವ ಕುರಿತು ಗೊತ್ತಾಗಿದೆ.ಆದ್ರೆ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಈಗ ದೂರು ಕೊಡಲಾಗಿದೆ.ಕಳದೆ 11 ನೇ ತಾರೀಖು ಘಟನೆ ನಡೆದಿದ್ದುತಡವಾಗಿ ದೇವಸ್ಥಾನದ ಕಾರ್ಯದರ್ಶಿ ಮುನಿರೆಡ್ಡಿ ದೂರು ದಾಖಲಿಸಿದ್ದಾರೆ.ಬೊಮ್ಮನಹಳ್ಳಿ ಠಾಣೆಗೆ ಮುನಿರೆಡ್ಡಿ ದೂರು ನೀಡಿದ್ದಾರೆ.ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಂಡು  ಪೊಲೀಸರು ತನಿಖೆ ಶುರುಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ