ಪಾಕಿಸ್ತಾನದವರಿಗೆ ಚರಂಡಿ ನೀರೇ ಗತಿ ಎಂದ ಶಾಸಕ!

ಸೋಮವಾರ, 18 ಫೆಬ್ರವರಿ 2019 (14:44 IST)
ಪಾಕಿಸ್ಥಾನದವರೇ ನೀವು ಸತ್ತರೆ ಸ್ವರ್ಗಕ್ಕೆ ಹೋಗಲ್ಲ. ಚರಂಡಿ ನೀರೇ ನಿಮಗೆ ಗತಿ. ಹೀಗಂತ ಬಿಜೆಪಿ ಶಾಸಕರೊಬ್ಬರು ಕಿಡಿಕಾರಿದ್ದಾರೆ.

ಹುತಾತ್ಮ ಯೋಧರಿಗೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸುವ ಸಮಯದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಚಿಕೆ ಗೇಡಿ ಪಾಕಿಸ್ತಾನದವರು ಸತ್ತರೆ ಸ್ವರ್ಗಕ್ಕೆ ಹೋಗುತ್ತಾರಂತೆ ಎಂದು ವ್ಯಂಗ್ಯವಾಡಿದ ಅವರು, ವಿಜಯಪುರದ ಒಬ್ಬ ಅಯೋಗ್ಯ ಪಾಕಿಸ್ತಾನಕ್ಕೆ ಯಾಕೆ ಬೈತೀರಾ ಅಂದಿದ್ದಾರೆ. ಅಯೋಗ್ಯ ನನ್ನ ಮಗನೇ ನೀವು ಹುಟ್ಟಿದ್ದು ಪಾಕಿಸ್ತಾನಕ್ಕಾ, ವಿಜಯಪುರಕ್ಕಾ ಎಂದು ಕಿಡಿಕಾರಿದರು.

ಗೃಹ ಮಂತ್ರಿ ಹೇಳುತ್ತಾರೆ ನಾನು ಯಾವುದೇ ಅಹಿತಕರ ಹೇಳಿಕೆ ಸಹಿಸುವದಿಲ್ಲ‌ ಎಂದು, ಆದರೆ ಮೊದಲು‌ ನಿಮ್ಮ ಪಕ್ಷದವರನ್ನು‌ ನೋಡಿಕೊಳ್ಳಿ. ಆ ಬಳಿಕ ಬಸನಗೌಡ, ಅಂನಂತ ಕುಮಾರ ಹೆಗಡೆಗೆ ನೋಡಿಕೊಳ್ಳಿ ಎಂದರು.

ಕೇಸು ಗೀಸಿಗೆಲ್ಲ ನಾನು ಹೆದರಲ್ಲ.  ಏನು ಕಿತ್ತು ಕೊಳ್ಳತೀರಿ ಕಿತ್ತುಕೊಳ್ಳಿ ಎಂದು ಗೃಹ ಸಚಿವರಿಗೆ ಸವಾಲು ಹಾಕಿದರು.
ನಾವು ದೇಶದ ಪರವಾಗಿ ಮಾತನಾಡುತ್ತೇವೆ. ನಾವೇನು ದೇಶದ ವಿರೋಧಿಗಳಲ್ಲ. ಯಾರು ದೇಶದ ಅನ್ನ‌ ತಿಂದು ದೇಶದ ವಿರುದ್ಧ ಮಾತನಾಡುವವರಿಗೆ ನಾವು ಬಿಡುವುದಿಲ್ಲ ಎಂದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ